ಕುಂಬಳೆ: ಕುಂಬಳೆ ಸನಿಹದ ಮೊಗ್ರಾಲ್ ಹೊಳೆಯಿಂದ ಅನಧಿಕೃತವಾಗಿ ಮರಳು ಸಂಗ್ರಹಿಸುವ ದಂಧೆ ವಿರುದ್ಧ ಕುಂಬಳೆ ಠಾಣೆ ಪೆÇಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರು ದೋಣಿ ಹಾಗೂ ಟಿಪ್ಪರ್ ಲಾರಿ ವಶಪಡಿಸಿಕೊಮಡಿದ್ದಾರೆ.
ಶುಕ್ರವಾರ ರಾತ್ರಿ ಕುಂಬಳೆ ಠಾಣೆ ಎಸ್ಐ ಸಿ.ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮರಳು ಸಂಗ್ರಹಿಸಲು ಬಳಸಿದ್ದ ಆರು ಫೈಬರ್ ದೋಣಿಗಳನ್ನು ವಶಕ್ಕೆ ತೆಗೆದುಕೊಂಡು, ನಂತರ ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ.
ಮೊಗ್ರಾಲ್ ಹೊಳೆಯಲ್ಲಿ ನೀರಿನೊಳಗೆ ಮುಳುಗಿಸಿಟ್ಟ ಸ್ಥಿತಿಯಲ್ಲಿ ದೋಣಿಗಳನ್ನು ಪತ್ತೆಹಚ್ಚಲಾಗಿತ್ತು. ಮರಳು ಸಾಗಿಸಲು ಬಳಸಿದ್ದ ಟಿಪ್ಪರ್ ಲಾರಿಯನ್ನು ಆರಿಕ್ಕಾಡಿ ಕೆಪಿ ರೆಸೋರ್ಟ್ ಸನಿಹದಿಂದ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದು, ಚಾಲಕ ಪರಾರಿಯಾಗಿದ್ದಾನೆ. ಒಟ್ಟುಹತ್ತು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.



