HEALTH TIPS

ಅಡುಗೆ ಅನಿಲ ಗ್ರಾಹಕರ ಗಮನಕ್ಕೆ ಇನ್ಮುಂದೆ ಗ್ಯಾಸ್ ಸಿಲಿಂಡರ್ ಪಡೆಯಲು ಈ ಹೊಸ ನಿಯಮ ಸಿಲಿಂಡರ್ ಪಡೆಯಲು ಇನ್ನು ಮುಂದೆ 'DAC' ಕೋಡ್ ಕಡ್ಡಾಯ!

ನವದೆಹಲಿ: ಕೇಂದ್ರ ಸರ್ಕಾರವು ದೇಶದ ಅಡುಗೆ ಅನಿಲ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಗಳನ್ನು ತಂದಿದ್ದು, ಗ್ರಾಹಕರಿಗೆ ಹೆಚ್ಚಿನ ಭದ್ರತೆ ಮತ್ತು ಪಾರದರ್ಶಕತೆ ನೀಡಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಏರಿಳಿತಗಳಿದ್ದರೂ ಭಾರತೀಯ ಗ್ರಾಹಕರಿಗೆ ಅಡೆತಡೆಯಿಲ್ಲದೆ ಗ್ಯಾಸ್ ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಪ್ರಸ್ತುತ ದೇಶದಲ್ಲಿ ಡಿಜಿಟಲ್ ಬುಕಿಂಗ್ ಪ್ರಮಾಣ ಶೇ. 98ಕ್ಕೆ ತಲುಪಿರುವುದು ಈ ಬದಲಾವಣೆಗೆ ವೇಗ ನೀಡಿದೆ.

ಡಿಎಸಿ ಕೋಡ್ ಇಲ್ಲದೆ ಸಿಲಿಂಡರ್ ಸಿಗುವುದು ಕಷ್ಟ

ಈ ಹೊಸ ನಿಯಮದ ಅತ್ಯಂತ ಪ್ರಮುಖ ಅಂಶವೆಂದರೆ ಡೆಲಿವರಿ ಅಥರೈಸೇಷನ್ ಕೋಡ್ ಅಥವಾ ಡಿಎಸಿ. ಇನ್ನು ಮುಂದೆ ಗ್ಯಾಸ್ ಸಿಲಿಂಡರ್ ನಿಮ್ಮ ಮನೆ ಬಾಗಿಲಿಗೆ ಬಂದಾಗ ಕೇವಲ ಹಣ ನೀಡಿದರೆ ಸಾಕಾಗುವುದಿಲ್ಲ. ಗ್ರಾಹಕರು ಗ್ಯಾಸ್ ಬುಕ್ ಮಾಡಿದಾಗ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ರಹಸ್ಯ ಕೋಡ್ ಬರುತ್ತದೆ. ಸಿಲಿಂಡರ್ ವಿತರಣೆ ಮಾಡುವ ಸಿಬ್ಬಂದಿಗೆ ಈ ಕೋಡ್ ಅನ್ನು ತೋರಿಸಿ, ಅವರು ಅದನ್ನು ತಮ್ಮ ಆಪ್ ನಲ್ಲಿ ಪರಿಶೀಲಿಸಿದ ನಂತರವೇ ಸಿಲಿಂಡರ್ ಹಸ್ತಾಂತರಿಸಲಾಗುತ್ತದೆ. ಇದರಿಂದ ಅರ್ಹ ಗ್ರಾಹಕರಿಗೆ ಮಾತ್ರ ಸಿಲಿಂಡರ್ ತಲುಪುವುದು ಖಚಿತವಾಗುತ್ತದೆ ಮತ್ತು ಸಿಲಿಂಡರ್ ಕಾಳಸಂತೆಗೆ ಹೋಗುವುದು ಅಥವಾ ಬೇರೆಯವರ ಪಾಲಾಗುವುದು ತಪ್ಪುತ್ತದೆ.

ವಲಸೆ ಕಾರ್ಮಿಕರು ಮತ್ತು ಬ್ಯಾಚುಲರ್ಸ್ ಗೆ ವಿಶೇಷ ಸೌಲಭ್ಯ

ಕೆಲಸದ ನಿಮಿತ್ತ ಕರ್ನಾಟಕದಂತಹ ರಾಜ್ಯಗಳಿಗೆ ವಲಸೆ ಬರುವ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಣ್ಣ ಕುಟುಂಬಗಳ ಹಿತದೃಷ್ಟಿಯಿಂದ ಸರ್ಕಾರ 5 ಕೆಜಿ ತೂಕದ ಸಣ್ಣ ಸಿಲಿಂಡರ್ ಗಳ ದಾಸ್ತಾನನ್ನು ದುಪ್ಪಟ್ಟುಗೊಳಿಸಿದೆ. ದೊಡ್ಡ ಸಿಲಿಂಡರ್ ಪಡೆಯಲು ತಾಂತ್ರಿಕ ತೊಂದರೆ ಇರುವವರಿಗೆ ಇದು ವರದಾನವಾಗಿದ್ದು, ಈಗಾಗಲೇ ರಾಜ್ಯದಲ್ಲಿ ಸುಮಾರು 69 ಸಾವಿರಕ್ಕೂ ಅಧಿಕ ಇಂತಹ ಸಣ್ಣ ಸಿಲಿಂಡರ್ ಗಳು ಮಾರಾಟವಾಗಿವೆ.

ಪೈಪ್ಡ್ ಗ್ಯಾಸ್ ಮತ್ತು ಪರಿಸರ ಸ್ನೇಹಿ ಅನಿಲಕ್ಕೆ ಹೆಚ್ಚಿನ ಆದ್ಯತೆ

ಸಿಲಿಂಡರ್ ಬುಕ್ ಮಾಡುವ ಮತ್ತು ಅದು ಬರುವವರೆಗೆ ಕಾಯುವ ಕಿರಿಕಿರಿ ತಪ್ಪಿಸಲು ಬೆಂಗಳೂರಿನಂತಹ ಮಹಾನಗರಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕವನ್ನು ವೇಗವಾಗಿ ವಿಸ್ತರಿಸಲಾಗುತ್ತಿದೆ. ಸಾವಿರಾರು ಗ್ರಾಹಕರು ಈಗಾಗಲೇ ಸಿಲಿಂಡರ್ ಮುಕ್ತ ಜೀವನಕ್ಕೆ ಮೊರೆ ಹೋಗಿದ್ದಾರೆ. ಇದರ ಜೊತೆಗೆ, ತ್ಯಾಜ್ಯದಿಂದ ಇಂಧನ ತಯಾರಿಸುವ ಸಂಕುಚಿತ ಜೈವಿಕ ಅನಿಲ ಯೋಜನೆಗೂ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಇದು ಇಂಧನ ಸ್ವಾವಲಂಬನೆ ಮತ್ತು ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿದೆ.

ಕೃಷಿ ಕ್ಷೇತ್ರ ಮತ್ತು ಕೈಗಾರಿಕೆಗಳಿಗೆ ಉತ್ತೇಜನ

ರಾಜ್ಯದಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಐಓಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಅನಿಲ ಬಳಕೆದಾರರ ಸಂಖ್ಯೆಯಲ್ಲಿ ಶೇ. 62 ರಷ್ಟು ಗಮನಾರ್ಹ ಏರಿಕೆಯಾಗಿದೆ. ಕೃಷಿ ಕ್ಷೇತ್ರದ ಅಗತ್ಯತೆಗಳನ್ನು ಮನಗಂಡು ರಸಗೊಬ್ಬರ ಕಾರ್ಖಾನೆಗಳಿಗೆ ಅನಿಲ ಪೂರೈಕೆಯನ್ನು ಶೇ. 95 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ಪೂರೈಕೆಯಾಗಲು ಅನುಕೂಲವಾಗಲಿದೆ.

ಗ್ರಾಹಕರಿಗೆ ಸರ್ಕಾರದ ಪ್ರಮುಖ ಸೂಚನೆ

ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ತಡೆಯಲು ಗ್ರಾಹಕರು ತಕ್ಷಣವೇ ತಮ್ಮ ಗ್ಯಾಸ್ ಏಜೆನ್ಸಿಯಲ್ಲಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ನಿಮ್ಮ ಫೋನಿಗೆ ಡಿಎಸಿ ಕೋಡ್ ಬಂದಾಗ ಮಾತ್ರ ಅದನ್ನು ಪರಿಶೀಲಿಸಿ ಸಿಲಿಂಡರ್ ಸ್ವೀಕರಿಸುವ ಮೂಲಕ ಸುರಕ್ಷಿತ ಮತ್ತು ಪಾರದರ್ಶಕ ವ್ಯವಸ್ಥೆಗೆ ಸಹಕರಿಸಬೇಕು ಎಂದು ಸರ್ಕಾರ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries