ಬದಿಯಡ್ಕ: ಪ್ರಧಾನ ಮಂತ್ರಿ ಜನಮಾನ್ ಉಪಕ್ರಮ ಮತ್ತು ಜನ್ ಧನ್ ಭಾಗಿಧಾರಿ, ಸಬ್ಸೆ ಸಬ್ಸೆ ಪಹಲೆ" ಎಂಬ ವಿಷಯದ ಅಡಿಯಲ್ಲಿ, ಕಾಸರಗೋಡಿನ ಬುಡಕಟ್ಟು ವಿಸ್ತರಣಾ ಕಚೇರಿಯ ಎಣ್ಮಕಜೆಯ ಬುಡಕಟ್ಟು ವಿಸ್ತರಣಾ ಕಚೇರಿಯ ವತಿಯಿಂದ ಪೆರಡಾಲ ಕೊರಗ ಉನ್ನತಿ ಅಂಗನವಾಡಿಯಲ್ಲಿ ಆಧಾರ್ ನವೀಕರಣ ಶಿಬಿರವನ್ನು ನಡೆಸಲಾಯಿತು. ಆಧಾರ್ ನವೀಕರಣ, ಇ-ಜಿಲ್ಲಾ ಸೇವೆಗಳು, ಮತದಾರರ ಗುರುತಿನ ಚೀಟಿಗಳು ಮತ್ತು ಪಡಿತರ ಚೀಟಿ ಸಂಬಂಧಿತ ಸೇವೆಗಳನ್ನು ಒದಗಿಸಲಾಯಿತು.
ಸುಮಾರು 60 ಜನರು ಶಿಬಿರದಲ್ಲಿ ಭಾಗವಹಿಸಿದರು ಮತ್ತು ಒದಗಿಸಲಾದ ಸೇವೆಗಳಿಂದ ಸಂತೃಪ್ತರಾದರು. ನೀರ್ಚಾಲು ಹಾಗೂ ಬದಿಯಡ್ಕದ ಅಕ್ಷಯ ಕೇಂದ್ರದವರ ಸಹಯೋಗದೊಂದಿಗೆ ಜರಗಿದ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿದರು. ಅವರು ಮಾತನಾಡಿ ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಲಭಿಸಬೇಕು. ಸರ್ಕಾರದ ಎಲ್ಲಾ ದಾಖಲೆಗಳು ಸಮರ್ಪಕವಾಗಿದ್ದರೆ ಮಾತ್ರ ಅವರಿಗೆ ಲಭಿಸಬೇಕಾದ ಸವಲತ್ತುಗಳನ್ನು ಪಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡ ಈ ವ್ಯವಸ್ಥೆಯು ಇಲ್ಲಿನ ಜನರಿಗೆ ಬಹುಪ್ರಯೋಜಕಾರಿಯಾಗಿದೆ ಎಂದರು.
ಬುಡಕಟ್ಟು ವಿಸ್ತರಣಾ ಕಚೇರಿಯ ಉಣ್ಣಿಕೃಷ್ಣನ್, ಇಲಾಖೆಯ ಅಧಿಕಾರಿಗಳು, ಬದಿಯಡ್ಕ ಗ್ರಾಮ ಪಂಚಾಯಿತಿ ಎಸ್ಟಿ ಪ್ರಮೋಟರ್ ೀಕ್ಷಿತ್ ಪೆರಡಾಲ ಸಿಎಸ್ಟಬ್ಯ್ಲು ಸೌಮ್ಯ ಮತ್ತು ಪೆರಡಾಲ ಅಂಗನವಾಡಿ ಶಿಕ್ಷಕಿ ಪುಷ್ಪಲತಾ ಸಿ.ಆರ್. ಹಾಜರಿದ್ದು ಶಿಬಿರದ ಯಶಸ್ವಿಗೆ ಸಹಕರಿಸಿದರು.

.jpg)
.jpg)
