HEALTH TIPS

ಅಮೆರಿಕ-ಇರಾನ್ ಸಂಘರ್ಷ: ಪಾಕಿಸ್ತಾನಕ್ಕೆ ಶಾಕ್ ನೀಡಿದ ಮಾಸ್ಕೋ! ಶಾಂತಿ ಸ್ಥಾಪನೆಗೆ ಭಾರತವೇ ಬೆಸ್ಟ್ ಎಂದ ರಷ್ಯಾ; ಬೆಚ್ಚಿಬಿದ್ದ ನೆರೆರಾಷ್ಟ್ರ!

ನವದೆಹಲಿ: ಜಾಗತಿಕ ರಾಜಕಾರಣದಲ್ಲಿ ಭಾರತದ ಮೌಲ್ಯ ಮತ್ತೊಮ್ಮೆ ಸಾಬೀತಾಗಿದೆ. ಪಶ್ಚಿಮ ಏಷ್ಯಾದಲ್ಲಿ ಹೊತ್ತಿ ಉರಿಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ತಣಿಸಲು ಭಾರತವು(India as Mediator) ಅತ್ಯಂತ ಪ್ರಬಲ ಮತ್ತು ವಿಶ್ವಾಸಾರ್ಹ ದೇಶ ಎಂದು ರಷ್ಯಾ ಘೋಷಿಸಿದೆ.

ಈ ಬಗ್ಗೆ ಶುಕ್ರವಾರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲ್ಯಾವ್ರೊವ್, ಪಾಕಿಸ್ತಾನವು ಕೇವಲ ತಾತ್ಕಾಲಿಕ ಸಂವಹನಕ್ಕೆ ಸೀಮಿತವಾಗಿದ್ದರೆ, ಭಾರತವು ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಸಾಮರ್ಥ್ಯ ಹೊಂದಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಪಾಕಿಸ್ತಾನದ ಪಾತ್ರ ಕೇವಲ 'ತುರ್ತು' ಸೇವೆಗೆ ಸೀಮಿತ..?

ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ತಲೆದೂರಿರುವ ಉದ್ವಿಗ್ನತೆಯನ್ನು ನಿಯಂತ್ರಿಸಲು ಪಾಕಿಸ್ತಾನವು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಸಂವಹನ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂಬ ಅಂಶವನ್ನು ಲ್ಯಾವ್ರೊವ್ ಒಪ್ಪಿಕೊಂಡಿದ್ದಾರೆ. ತುರ್ತು ಸಮಸ್ಯೆಗಳನ್ನು ಬಗೆಹರಿಸಲು ಪಾಕಿಸ್ತಾನವು ಸಹಾಯ ಮಾಡುತ್ತಿರಬಹುದು. ಆದರೆ, ಎರಡೂ ರಾಷ್ಟ್ರಗಳು ಸುಸ್ಥಿರ ಮತ್ತು ದೀರ್ಘಾವಧಿಯ ಮಧ್ಯಸ್ಥಿಕೆಯನ್ನು ಬಯಸಿದರೆ, ಅದಕ್ಕೆ ಭಾರತಕ್ಕಿಂತ ಸೂಕ್ತ ದೇಶ ಮತ್ತೊಂದಿಲ್ಲ ಎಂದು ರಷ್ಯಾ ವಿದೇಶಾಂಗ ಸಚಿವ ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೇಕೆ ಈ ಗೌರವ? ಲ್ಯಾವ್ರೊವ್ ನೀಡಿದ ಕಾರಣಗಳಿವು

ರಷ್ಯಾ ವಿದೇಶಾಂಗ ಸಚಿವರು ಭಾರತದ ಪರವಾಗಿ ಬ್ಯಾಟಿಂಗ್ ಮಾಡಲು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ವ್ಯಾಪಕ ರಾಜತಾಂತ್ರಿಕ ಅನುಭವ: ಭಾರತವು ದಶಕಗಳಿಂದ ಅಂತಾರಾಷ್ಟ್ರೀಯ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವಲ್ಲಿ ಪ್ರಬುದ್ಧತೆ ತೋರಿದೆ.
ಬ್ರಿಕ್ಸ್ ಅಧ್ಯಕ್ಷತೆ: ಪ್ರಸ್ತುತ ಭಾರತವು ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೊಂದಿದೆ.

ತಟಸ್ಥ ನಿಲುವು: ರಷ್ಯಾ-ಯುಕ್ರೇನ್ ಯುದ್ಧದಿಂದ ಹಿಡಿದು ಇಸ್ರೇಲ್-ಪ್ಯಾಲೇಸ್ಟೈನ್ ಸಂಘರ್ಷದವರೆಗೆ ಭಾರತವು ಯಾವಾಗಲೂ ಶಾಂತಿ ಮತ್ತು ಸಂವಾದದ ಹಾದಿಯನ್ನೇ ಪ್ರತಿಪಾದಿಸಿದೆ.

ಮೋದಿ-ಜೈಶಂಕರ್ ಜೊತೆಗಿನ ರಹಸ್ಯ ಚರ್ಚೆ..?

ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಲ್ಯಾವ್ರೊವ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯುಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾದ ಅಸ್ಥಿರತೆಯ ಬಗ್ಗೆ ಚರ್ಚಿಸಲಾಗಿದೆ. ನರೇಂದ್ರ ಮೋದಿಯವರು ಈ ವರ್ಷದ ಅಂತ್ಯದಲ್ಲಿ ರಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಹತ್ವದ ಸುದ್ದಿಯನ್ನೂ ಲ್ಯಾವ್ರೊವ್ ಇದೇ ವೇಳೆ ಖಚಿತಪಡಿಸಿದ್ದಾರೆ.

ತೈಲ ಮತ್ತು ಆರ್ಥಿಕ ಹಿತಾಸಕ್ತಿ

ಭಾರತವು ಈ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಈ ಭಾಗದಲ್ಲಿ ಶಾಂತಿ ನೆಲೆಸುವುದು ಭಾರತದ ಆರ್ಥಿಕ ಹಿತಾಸಕ್ತಿಯ ದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಇರಾನ್ ಮತ್ತು ಅರಬ್ ದೇಶಗಳ ನಡುವೆ ಮಾತುಕತೆ ಆರಂಭಿಸಲು ಭಾರತವು ಮುಂದಾಗಬೇಕು ಎಂದು ರಷ್ಯಾ ಆಶಿಸಿದೆ,


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries