ತಿರುವನಂತಪುರಂ: ಪ್ರತಿಪಕ್ಷ ನಾಯಕ ಪಿಣರಾಯಿ ವಿಜಯನ್ ಉಪಸ್ಥಿತರಿದ್ದ ಸಭೆಯೊಂದರಲ್ಲಿ ವಂದೇ ಮಾತರಂ ಹಾಡಿರುವುದುದಾಗಿ ವಿವಾದವೆದ್ದಿದೆ. ಎಲ್ಡಿಎಫ್ ಮಿತ್ರ ಪಕ್ಷ ಕಾಂಗ್ರೆಸ್ ಎಸ್ ಪಕ್ಷದ ಕಾರ್ಯಕ್ರಮದಲ್ಲಿ ಪಿಣರಾಯಿ ವಿಜಯನ್ ವೇದಿಕೆಯಲ್ಲಿರುತ್ತಾ ವಂದೇ ಮಾತರಂ ಹಾಡಲಾಯಿತು. ಕಾಂಗ್ರೆಸ್ ಪಕ್ಷದ ಪುನಸ್ರ್ಥಾಪನಾ ದಿನಾಚರಣೆಯ ಸ್ಥಳದಲ್ಲಿ ಈ ಘಟನೆ ನಡೆದಿದೆ.
ತಿರುವನಂತಪುರಂನ ಭಾಗ್ಯಮಾಲಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ಮತ್ತು ಕಾಂಗ್ರೆಸ್ ಎಸ್ ಪಕ್ಷದ ನಾಯಕ ಕಡನ್ನಪಳ್ಳಿ ರಾಮಚಂದ್ರನ್ ಕೂಡ ಪಿಣರಾಯಿ ವಿಜಯನ್ ವಂದೇ ಮಾತರಂ ಹಾಡಿದಾಗ ವೇದಿಕೆಯಲ್ಲಿದ್ದರು. ಸಿಪಿಎಂ ಸೇರಿದಂತೆ ಎಡಪಕ್ಷಗಳು ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಬೇಕೆಂಬ ಕೇಂದ್ರ ನಿರ್ದೇಶನವನ್ನು ವಿರೋಧಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಿರುವುದು ವಿವಾದಕ್ಕೆಡೆಯಾಗಿದೆ.
ಇತಿಹಾಸದಲ್ಲಿ ಮೊದಲ ಬಾರಿಗೆ ಕೇರಳ ವಿಧಾನಸಭೆಯಲ್ಲಿ ವಂದೇ ಮಾತರಂ ಹಾಡಿದ ಘಟನೆಯ ಬಗ್ಗೆ ಇತ್ತೀಚೆಗೆ ಚರ್ಚೆ ನಡೆದಿತ್ತು. ವಿಧಾನಸಭೆಯಲ್ಲಿ ಮೊದಲ ಭಾಗವನ್ನು ಮಾತ್ರ ಹಾಡಲಾಯಿತು. ಇದಕ್ಕೂ ಮೊದಲು ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಂಪೂರ್ಣ ವಂದೇ ಮಾತರಂ ಹಾಡಲಾಗಿದ್ದು, ಇದು ವಿವಾದಾತ್ಮಕವಾಗಿತ್ತು.

