ತಿರುವನಂತಪುರಂ: ಇಡಿ ದಾಳಿ ನಂತರದ ಹಿಂಸಾಚಾರದ ಬಗ್ಗೆ ರಾಜ್ಯಪಾಲರು ಡಿಜಿಪಿಯಿಂದ ಮಾಹಿತಿ ಕೇಳಿದ್ದಾರೆ. ಪೋಲೀಸರು ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು.
ತಿರುವನಂತಪುರಂನಲ್ಲಿರುವ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ ಅವರ ಮನೆಯ ಮೇಲೆ ಇಡಿ ದಾಳಿ ನಂತರ ರಾಜಧಾನಿಯಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಪಲಾಯಂ ಪ್ರದೇಶ ಸಮಿತಿ ಕಚೇರಿಯ ಮುಂದೆ ಇಡಿ ಅಧಿಕಾರಿಗಳ ವಾಹನಗಳ ಮೇಲೆ ದಾಳಿ ಮಾಡಿದ ಕಾರ್ಯಕರ್ತರನ್ನು ಪೋಲೀಸ್ ಅಧಿಕಾರಿಗಳು ಬಂಧಿಸುವುದನ್ನು ಮುಂದುವರಿಸಿದ್ದಾರೆ. ಕಾರ್ಯಕರ್ತರನ್ನು ಬಂಧಿಸಲು ಬಿಡುವುದಿಲ್ಲ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಎಡಿಜಿಪಿ ಎಚ್. ವೆಂಕಟೇಶ್, ಪ್ರಕರಣದಲ್ಲಿ ಕೆಲವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ನಾಲ್ವರು ಮ್ಯೂಸಿಯಂ ಪೆÇಲೀಸರ ವಶದಲ್ಲಿದ್ದಾರೆ. ಇನ್ನೂ ಎಂಟು ಜನರನ್ನು ವಶಕ್ಕೆ ಪಡೆಯಬೇಕಾಗಿದೆ. ಇಡಿ ಅಧಿಕಾರಿಗಳ ದಾಳಿ ಪ್ರಕರಣದಲ್ಲಿ 12 ಜನರನ್ನು ಗುರುತಿಸಲಾಗಿದೆ.
ಮನೋಜ್, ಜೀವನ್ ಶ್ರೀಜಿತ್ ಮತ್ತು ಶಾನು ಅವರನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಬಂಧಿಸಲು ಎಲ್ಲೆಡೆ ಶೋಧ ಮುಂದುವರೆದಿದೆ ಎಂದು ಡಿಸಿಪಿ ತಪೆÇೀಶ್ ಬಸುಮತರಿ ತಿಳಿಸಿದ್ದಾರೆ.
ಪಲಾಯಂ ಏರಿಯಾ ಸಮಿತಿ ಕಚೇರಿಯೊಳಗೆ ಯಾರಾದರೂ ಆರೋಪಿಗಳು ಇದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಪೋಲೀಸರು ಅಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇಡಿ ತನ್ನದೇ ಆದ ಷರತ್ತುಗಳ ಮೇಲೆ ದಾಳಿಗೆ ಬಂದಿತು. ಕೇರಳ ಪೋಲೀಸರಿಗೆ ಮಾಹಿತಿ ನೀಡಿರಲಿಲ್ಲ ಎಂದು ಡಿಸಿಪಿ ಸ್ಪಷ್ಟಪಡಿಸಿದ್ದಾರೆ.



