ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡಿನ ನಿಯುಕ್ತ ಶಾಸಕ, ಮುಸ್ಲಿಂಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದ ಪಡೆದರು. ಈ ಸಂದರ್ಭ ನೂತನ ಶಾಸಕರನ್ನು ಶ್ರೀಗಳು ಶಾಲುಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಮಾಹಿನ್ ಕೇಳೋಟ್, ಜಲೀಲ್ ಎರ್ದುಂಕಡವ್, ಒ. ಪಿ. ಹನೀಫ, ಬಿಎಂಎ ಖಾದರ್ ಮೊದಲಾದವರು ಜೊತೆಗಿದ್ದರು.


