HEALTH TIPS

ಭಾರತ ಈಗ ನಕ್ಸಲ್ ಮುಕ್ತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ

ನವದೆಹಲಿ: ಭಾರತವು ನಕ್ಸಲಿಸಂನಿಂದ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದರು. ಭದ್ರತಾ ಪಡೆಗಳ ಅಪಾರ ತ್ಯಾಗದ ನಂತರ ದಶಕಗಳ ಕಾಲ ನಡೆದ ದಂಗೆಯನ್ನು ಕೊನೆಗೂ ಸೋಲಿಸಲಾಗಿದೆ ಎಂದು ಅವರು ಹೇಳಿದರು. ಭಾರತ ಈಗ ನಕ್ಸಲರಿಂದ ಮುಕ್ತವಾಗಿದೆ ಎಂದು ನಾನು ಎದೆಯುಬ್ಬಿಸಿ ಹೇಳಬಲ್ಲೆ ಎಂದು ಹೇಳಿದರು.

ಛತ್ತೀಸ್‌ಗಢದ (Chhattisgarh) ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ಚಟುವಟಿಕೆಯ ಕೇಂದ್ರಬಿಂದು ಎಂದು ಪರಿಗಣಿಸಲಾದ ಜಗದಲ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾ ಈ ಮಾತುಗಳನ್ನಾಡಿದರು.

ಛತ್ತೀಸ್‌ಗಢಕ್ಕೆ ಮೂರು ದಿನಗಳ ಭೇಟಿ ನೀಡಿರುವ ಶಾ, ಬಸ್ತಾರ್‌ನಲ್ಲಿ ಶಾಶ್ವತ ಶಾಂತಿ ಮತ್ತು ತ್ವರಿತ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಬದ್ಧವಾಗಿವೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಈ ಪ್ರದೇಶವು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ಬುಡಕಟ್ಟು ಪ್ರದೇಶವಾಗಿ ಹೊರಹೊಮ್ಮಲಿದೆ ಎಂದು ಭರವಸೆಯಿತ್ತರು.

ಬಸ್ತಾರ್ ಅಕಾಡೆಮಿ ಆಫ್ ಡ್ಯಾನ್ಸ್, ಆರ್ಟ್ ಅಂಡ್ ಲಿಟರೇಚರ್ (ಬಾದಲ್) ಕ್ಯಾಂಪಸ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಶಾ, ಇದನ್ನು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಭದ್ರತಾ ಸಿಬ್ಬಂದಿ ಮಾಡಿದ ತ್ಯಾಗಗಳಿಗೆ ಈ ಸಾಧನೆಗೆ ಮನ್ನಣೆ ನೀಡಿದರು.

ನೃತ್ಯ, ಕಲೆ ಮತ್ತು ಸಾಹಿತ್ಯದ ಬಸ್ತರ್ ಅಕಾಡೆಮಿ ಆವರಣದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಈ ಸಂದರ್ಭವನ್ನು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ಕಾರ್ಯಾಚರಣೆಗಳಲ್ಲಿ ಹಲವಾರು ಭದ್ರತಾ ಸಿಬ್ಬಂದಿ ತಮ್ಮ ಪ್ರಾಣತ್ಯಾಗ ಮಾಡಿದ ನಂತರ ಸಾಕಾರಗೊಂಡ ಕನಸಿದು ಎಂದು ಶ್ಲಾಘಿಸಿದರು.

ಅಲ್ಲದೆ, 1970 ರ ದಶಕದಲ್ಲಿ ಹರಡಲು ಪ್ರಾರಂಭಿಸಿದ ನಕ್ಸಲಿಸಂ, ಹಿಂಸಾಚಾರದ ಮೂಲಕ ಮೂರು ತಲೆಮಾರುಗಳನ್ನು ಬಲಿ ತೆಗೆದುಕೊಂಡಿದೆ. ಇದು ಜನರಿಗೆ ಮೂಲಭೂತ ಸೌಕರ್ಯಗಳು ಹಾಗೂ ಅಭಿವೃದ್ಧಿ ಸಿಗದಂತೆ ವಂಚಿಸಿದೆ ಎಂದು ಹೇಳಿದರು.

2014 ರಲ್ಲಿ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಮತ್ತು ಎಡಪಂಥೀಯ ಉಗ್ರಗಾಮಿತ್ವಕ್ಕೆ (ನಕ್ಸಲಿಸಂ) ಸಂಬಂಧಿಸಿದಂತೆ ಅನೇಕ ಸವಾಲುಗಳಿದ್ದವು. ಆದರೆ ಇಂದು, ದೇಶವು ಈ ಮೂರೂ ಸವಾಲುಗಳನ್ನು ಬಹುಮಟ್ಟಿಗೆ ಮೆಟ್ಟಿ ನಿಂತಿದೆ ಎಂದು ಅವರು ಹೇಳಿದರು.

ಮಾವೋವಾದಿಗಳ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ 1,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗೆ ಗೃಹ ಸಚಿವರು ಅಮರ್ ವಾಟಿಕಾ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು. ಬಸ್ತಾರ್‌ಗೆ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯನ್ನು ತರುವಲ್ಲಿ ನಮ್ಮ ಯೋಧರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಸ್ತಾರ್‌ನಾದ್ಯಂತ ಗೃಹ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ರಸ್ತೆಗಳು, ಗ್ರಾಮೀಣಾಭಿವೃದ್ಧಿ ಯೋಜನೆಗಳು, ಬ್ಯಾಂಕ್ ಶಾಖೆಗಳು, ಅಂಚೆ ಕಚೇರಿಗಳು, ಎಲ್‌ಪಿಜಿ ಪ್ರವೇಶ, ಆಹಾರ ಧಾನ್ಯ ವಿತರಣೆ, ಕುಡಿಯುವ ನೀರು ಮತ್ತು ವಿದ್ಯುತ್‌ನಂತಹ ಮೂಲಸೌಕರ್ಯ ಮತ್ತು ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries