HEALTH TIPS

ಭಾರತ ಜನಗಣತಿ 2027: ಡಿಜಿಟಲ್ ಮಾಹಿತಿ ಸಲ್ಲಿಸಿದ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಮತ್ತು ವರ್ಣಚಿತ್ರಕಾರ ಪಿ.ಎಸ್.ಪುಣಿಚಿತ್ತಾಯ-ಜಿಲ್ಲೆಯಲ್ಲಿ ಮೊದಲ ಹಂತದ ಜನಗಣತಿ ಚಟುವಟಿಕೆಗಳು ಪ್ರಗತಿಯಲ್ಲಿ


ಕಾಸರಗೋಡು
: ಜಿಲ್ಲೆಯಲ್ಲಿ ಭಾರತ ಜನಗಣತಿ 2027 ರ ಮೊದಲ ಹಂತದ ಚಟುವಟಿಕೆಗಳು ಪ್ರಗತಿಯಲ್ಲಿದ್ದು, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಮತ್ತು ಪ್ರಸಿದ್ಧ ವರ್ಣಚಿತ್ರಕಾರ ಪಿ ಎಸ್ ಪುಣಿಚಿತ್ತಾಯ ತಮ್ಮ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸುವ ಮೂಲಕ ಸ್ವಯಂ-ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಪಿ ಎಸ್ ಪುಣಿಚಿತ್ತಾಯ ಮತ್ತು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ತಮ್ಮ ಮೊಬೈಲ್ ಪೋನ್‍ಗಳಲ್ಲಿ ಎಲ್ಲಾ 34 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸ್ವಯಂ-ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ನಂತರ, ಇಬ್ಬರಿಗೂ 11 ಅಂಕೆಗಳ ಸ್ವಯಂ-ಗಣತಿ ಐಡಿ ನೀಡಲಾಯಿತು.

ಎಡಿಎಂ ಪಿ. ಉದಯಕುಮಾರ್, ಕಲೆಕ್ಟರೇಟ್, ಜನಗಣತಿ ಇಲಾಖೆಯ ಜೂನಿಯರ್ ಸೂಪರಿಂಟೆಂಡೆಂಟ್ ಕೆ. ಜಗದೀಶ ಮತ್ತು ಜನಗಣತಿ ಇಲಾಖೆಯ ಗುಮಾಸ್ತ ಪಿ. ರಾಕೇಶ್ ನೇತೃತ್ವದ ತಂಡವು ಕಾರಡ್ಕದಲ್ಲಿರುವ ಪುಣಿಚಿತ್ತಾಯ ಅವರ ಮನೆ ಮತ್ತು ಬೆಳೇರಿಯಲ್ಲಿರುವ ಪದ್ಮಶ್ರೀ ಸತ್ಯನಾರಾಯಣ ಅವರ ಮನೆಗೆ ಭೇಟಿ ನೀಡಿ ಸ್ವಯಂ-ಗಣತಿ ಚಟುವಟಿಕೆಗಳನ್ನು ಮುನ್ನಡೆಸಿತು.

ಛಾಯಾಚಿತ್ರ- ಕಾಸರಗೋಡಿನ ವರ್ಣಚಿತ್ರಕಾರ ಪುಣಿಂಚಿತ್ತಾಯ ಅವರು ಆನ್‍ಲೈನ್‍ನಲ್ಲಿ ಮಾಹಿತಿಯನ್ನು ಸಲ್ಲಿಸುವ ಮೂಲಕ ಸ್ವಯಂ-ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries