HEALTH TIPS

ಮುನಂಬಮ್ ನಂತರ, ತಳಿಪರಂಬದಲ್ಲಿರುವ 634 ಎಕರೆ ಭೂಮಿಯತ್ತ ವಕ್ಫ್ ಗಮನ: ವಕ್ಫ್ ಆಸ್ತಿಗಳನ್ನು ಗುರುತಿಸಿ ಮರಳಿ ಪಡೆಯಲು ಮಂಡಳಿಯಿಂದ ಕ್ರಮ

ಕೋಝಿಕೋಡ್: ಮುನಂಬಮ್ ಭೂ ವಿವಾದವು ರಾಜ್ಯದಲ್ಲಿ ಬಿಸಿ ರಾಜಕೀಯ ಚರ್ಚೆಗಳಿಗೆ ಕಾರಣವಾಗಿದ್ದರೆ, ಕೇರಳ ವಕ್ಫ್ ಮಂಡಳಿಯು ತಳಿಪರಂಬದಲ್ಲಿರುವ ವಕ್ಫ್ ಭೂಮಿಗೆ ಗಮನ ಹರಿಸುತ್ತಿದೆ. 


ನಗರದ ಪ್ರಮುಖ ಭಾಗಗಳಲ್ಲಿ ಹರಡಿರುವ ವಕ್ಫ್ ಆಸ್ತಿಗಳನ್ನು ಗುರುತಿಸಿ ಮರಳಿ ಪಡೆಯಲು ಮಂಡಳಿಯು ಕ್ರಮಗಳನ್ನು ಪ್ರಾರಂಭಿಸಿದೆ. ಪುರಸಭೆಯ ಕಚೇರಿ ಮತ್ತು ಹಲವಾರು ವಾಣಿಜ್ಯ ಕಟ್ಟಡಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳು ಈ ಭೂಮಿಯಲ್ಲಿವೆ ಎಂದು ತಿಳಿದುಬಂದಿದೆ.

ಮೊದಲ ಹಂತದಲ್ಲಿ, ತಳಿಪರಂಬದಲ್ಲಿ ಖಾಸಗಿ ವ್ಯಕ್ತಿಗಳು ಆಕ್ರಮಿಸಿಕೊಂಡಿದ್ದಾರೆ ಅಥವಾ ಅತಿಕ್ರಮಿಸಿದ್ದಾರೆ ಎನ್ನಲಾದ ವಕ್ಫ್ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಮಂಡಳಿಯು ಸಂಗ್ರಹಿಸಲು ಪ್ರಾರಂಭಿಸಿದೆ.

ವಕ್ಫ್ ಮಂಡಳಿಯ ಪ್ರಕಾರ, ತಳಿಪರಂಬದಲ್ಲಿ ಸುಮಾರು 634 ಎಕರೆ ವಕ್ಫ್ ಭೂಮಿ ಇದೆ. ಇದರಲ್ಲಿ ಸುಮಾರು 400 ಎಕರೆ ಭೂಮಿಯನ್ನು ತಳಿಪರಂಬ ಜಮಾಅತ್ ಟ್ರಸ್ಟ್‍ನ ಮುತವಳ್ಳಿ ಉಮೀದ್ ಪೆÇೀರ್ಟಲ್‍ನಲ್ಲಿ ನೋಂದಾಯಿಸಲಾಗಿದೆ. ಉಳಿದ ಭೂಮಿಗೆ ದಾಖಲೆಗಳು ಇನ್ನೂ ಕಂಡುಬಂದಿಲ್ಲ ಎಂದು ತಳಿಪರಂಬ ವಕ್ಫ್ ರಕ್ಷಣಾ ಸಮಿತಿ ಆರೋಪಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries