ತಿರುವನಂತಪುರಂ: ಇಂದಿನಿಂದ ರಾಜ್ಯದಲ್ಲಿ ಟಿಪ್ಪರ್ ಲಾರಿಗಳು ಸೇರಿದಂತೆ ಭಾರೀ ವಾಹನಗಳಿಗೆ ಸಮಯ ನಿಯಂತ್ರಣ ವಿಧಿಸಲಾಗಿದೆ. ಶಾಲೆ ಮತ್ತು ಕಚೇರಿ ಸಮಯದ ಆಧಾರದ ಮೇಲೆ ಬೆಳಿಗ್ಗೆ ಮತ್ತು ಸಂಜೆ ನಿಯಂತ್ರಣ ಇರಲಿವೆ. ನಿರ್ಬಂಧಿತ ಸಮಯದಲ್ಲಿ ಅಂತಹ ವಾಹನಗಳನ್ನು ಗೊತ್ತುಪಡಿಸಿದ ಕೇಂದ್ರಗಳಲ್ಲಿ ನಿಲ್ಲಿಸಬೇಕು. ನಿರ್ಬಂಧಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮೋಟಾರು ವಾಹನ ಇಲಾಖೆ ಮತ್ತು ಪೋಲೀಸರು ಜಂಟಿ ತಪಾಸಣೆ ನಡೆಸುವರು.
ಜಿಲ್ಲೆಗಳು ಮತ್ತು ನಿಯಂತ್ರಣ ಸಮಯಗಳು: ತಿರುವನಂತಪುರಂ: ಬೆಳಿಗ್ಗೆ 8.00-10.00, ಅಪರಾಹ್ನ 3.00-4.30, ಕೊಲ್ಲಂ: ಬೆಳಿಗ್ಗೆ 8.30-10.00, ಅಪರಾಹ್ನ 3.30-4.30, ಪತ್ತನಂತಿಟ್ಟ: ಬೆಳಿಗ್ಗೆ 8.30-10.00, ಅಪರಾಹ್ನ 3.00-4.30, ಆಲಪ್ಪುಳ: ಬೆಳಿಗ್ಗೆ 18.30-10.00, ಅಪರಾಹ್ನ: 3.30-5.00, ಕೊಟ್ಟಾಯಂ: ಬೆಳಗ್ಗೆ 8.30-9.30, ಅಪರಾಹ್ನ 3.30-4.30 ಇಡುಕ್ಕಿ, ಎರ್ನಾಕುಳಂ: ಬೆಳಗ್ಗೆ 8.30-10.00, ಸಂಜೆ 4.00-5.00 ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್: 8.30-10.00, ಅಪರಾಹ್ನ 3.30-05.00, ಕಣ್ಣೂರು ಬೆಳಗ್ಗೆ 8.00-10.00, ಅಪರಾಹ್ನ 4.00-6.00, ಕಾಸರಗೋಡು: ಬೆಳಗ್ಗೆ 9.00-10.00, ಸಂಜೆ 4.00-5.00 ಎಂದು ಸಮಯ ಕ್ರಮೀಕರಿಸಲಾಗಿದೆ.



