ಕಾಸರಗೋಡು: ಮಹಾರಾಷ್ಟ್ರದಲ್ಲಿ ಸೆಪ್ಟಿಕ್ ಟ್ಯಾಂಕ್ನ ಮ್ಯಾನ್ಹೋಲ್ ಒಳಗೆ ಬಿದ್ದು ಕಾಸರಗೋಡು ನಿವಾಸಿ ಇಂಜಿನಿಯರ್, ಉದಿನೂರು ವಡಕ್ಕುಪುರಂ ನಿವಾಸಿ ಕೆ. ರತೀಶ್ (42) ಮೃತಪಟ್ಟಿದ್ದಾರೆ.
ಮುಂಬೈ ಸಮೀಪದ ನಾಗೋಥಾನೆಯಲ್ಲಿ ಕರ್ತವ್ಯದ ಮಧ್ಯೆ ಘಟನೆ ನಡೆದಿದೆ. 'ಇಂಡಸ್ಟ್ರಿಯಲ್ ಎನರ್ಜಿ ಸೊಲ್ಯೂಷನ್' ಎಂಬ ಕಂಪನಿಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರತೀಶ್ ಅವರು ಮಂಗಳವಾರ ಸಂಜೆ ಕೆಲಸ ನಿರ್ವಹಿಸುತ್ತಿರುವ ಮಧ್ಯೆ ರತೀಶ್ ಕಾಣೆಯಗಿದ್ದರು. ಈ ಹಿನ್ನೆಲೆಯಲ್ಲಿ ನಡೆಸಿದ ಹುಡುಕಾಟದ ಬಳಿಕ, ತಡರಾತ್ರಿ ಅವರ ಮೃತದೇಹ ಪತ್ತೆಯಾಗಿದೆ. ಅವರು ಕಳೆದ ಹಲವು ವರ್ಷಗಳಿಂದ ಇದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರತೀಶ್ ಅವರು ರಾಯಗಢ ಜಿಲ್ಲೆಯ ರೋಹಾ ತಾಲೂಕಿನಲ್ಲಿ ವಾಸಿಸುತ್ತಿದ್ದರು. ಇವರು ದಿ. ಮಾಡಕ್ಕಾಲ್ ಕುಞಂಬು ಮತ್ತು ಕೆ. ಮಾಧವಿ ದಂಪತಿಯ ಪುತ್ರರಾಗಿದ್ದಾರೆ.

