ಕಾಸರಗೋಡು : ಜಿಲ್ಲಾ ಪ್ರಾಂಶುಪಾಲರ ವೇದಿಕೆಯ ಆಶ್ರಯದಲ್ಲಿ ಸನ್ಮಾನ ಸಮಾರಂಭ ನಗರಸಭಾ ಸಮ್ಮೇಳನ ಸಭಾಂಗಣದಲಿ ಜರುಗಿತು. ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಸಮಾರಂಭ ಉದ್ಘಾಟಿಸಿದರು. ಪ್ರಾಂಶುಪಾಲರ ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಎ.ವಿ. ಸುರೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಕಣ್ಣೂರು ಆರ್ಡಿಡಿಯ ಎ.ಕೆ. ವಿನೋದ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಸಂಯೋಜಕರಾದ ಸಿ.ವಿ. ಅರವಿಂದಕ್ಷನ್, ಪಿ.ಮೋಹನನ್, ಡಾ., ಎನ್.ವೇಣುನಾಥನ್, ಡಾ. ಟಿ. ಗೀತಾ ಉಪಸ್ಥಿತರಿದ್ದರು.
ಪ್ರಾಂಶುಪಾಲರ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ರಮೇಶನ್ ಸ್ವಾಗತಿಸಿದರು. ಕೋಶಾಧಿಕಾರಿ ಪಿ.ವಿ. ಲೀನಾ ವಂದಿಸಿದರು.

