HEALTH TIPS

ಜಿಲ್ಲಾ ಎಲ್‌ ನಿನೊ ಘಟಕ ಸ್ಥಾಪಿಸಿ, ಪರ್ಯಾಯ ಬೆಳೆ ಉತ್ತೇಜಿಸಿ: ಕೇಂದ್ರ ಸೂಚನೆ

 ನವದೆಹಲಿ: ಈ ಬಾರಿ ಮುಂಗಾರು ಮಳೆ ವೈಫಲ್ಯ ಬರೀ ಕರ್ನಾಟಕಕ್ಕೆ ಮಾತ್ರವಲ್ಲ. ದೇಶದ 10ಕ್ಕೂ ಹೆಚ್ಚು ಪ್ರಮುಖ ರಾಜ್ಯಗಳಿಗೂ ತಟ್ಟಿದೆ. ಈ ಕಾರಣದಿಂದ ಕೇಂದ್ರ ಸರ್ಕಾರವು ಬರದ ಹಿನ್ನೆಲೆಯಲ್ಲಿ ರೈತರನ್ನು ಜಾಗೃತಗೊಳಿಸುವ ಜತೆಗೆ ಆಯಾ ಭಾಗದ ಪರ್ಯಾಯ ಬೆಳೆಗಳನ್ನು ಬೆಳೆಯಲು ಉತ್ತೇಜಿಸುವಂತೆ ಸೂಚನೆ ನೀಡಿದೆ. 


ಅಲ್ಲದೇ ಎಲ್‌ನಿನೋ ಘಟಕವನ್ನು ಸ್ಥಾಪಿಸಿ ಪ್ರತಿ ವಾರದ ಆಧಾರದಲ್ಲಿ ಪರಿಶೀಲನಾ ಸಭೆ ಆಯೋಜಿಸಲು ಸೂಚಿಸಲಾಗಿದೆ.

ವಿಶೇಷವಾಗಿ ಎಲ್‌ ನಿನೋ ಮಾರುತಗಳ ಪರಿಣಾಮ ಕೃಷಿ ವಲಯದ ಮೇಲೆ ಹೆಚ್ಚು ಆಗುವ ಸಾಧ್ಯತೆಯಿದೆ. ಮಳೆ ಕೊರತೆ ಉಂಟಾದರೆ ನೇರವಾಗಿ ಕೃಷಿಕರ ಮೇಲೆ ಪರಿಣಾಮ ಉಂಟಾಗುವುದರಿಂದ ಮುನ್ನೆಚ್ಚರಿಕೆ ಅನಿವಾರ್ಯ ಎನ್ನುವುದು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನ.

ಕೇಂದ್ರ ಕೃಷಿ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಶಿವರಾಜಸಿಂಗ್ ಚೌಹಾಣ್‌ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರದ ಕೃಷಿ ಸಚಿವರು, ಕೃಷಿ ಆಯುಕ್ತರು ಹಾಗೂ ಪ್ರಮುಖರ ವಿಡಿಯೋ ಕಾನ್ಫರೆನ್ಸ್‌ ಸಭೆ ಆಯೋಜಿಸಿತ್ತು.

ದೇಶದ 100ಕ್ಕೂ ಜಿಲ್ಲೆಗಳಲ್ಲಿ ಈಗಾಗಲೇ ಬರದ ವಾತಾವರಣ ಕಾಣಿಸಿಕೊಂಡಿದೆ. ಇನ್ನು ಮುಂದಿನ ದಿನಗಳಲ್ಲೂ ಮಳೆಯಾಗದೇ ಇದ್ದರೆ ಇನ್ನಷ್ಟು ಹೆಚ್ಚುವ ಸೂಚನೆಯೂ ಇರುವುದರಿಂದ ಎಲ್ಲಾ ರಾಜ್ಯಗಳಲ್ಲೂ ಆಯಾ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲಾಧಿಕಾರಿಗಳು, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.

ಆಯಾ ಜಿಲ್ಲಾ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳು, ಕೆವಿಕೆಗಳು, ಐಸಿಎಆರ್ ಸಂಸ್ಥೆಗಳು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ಎಲ್ ನಿನೊ ಮಾನಿಟರಿಂಗ್ ಘಟಕ ಸ್ಥಾಪಿಸಿ ನಿಯಮಿತವಾಗಿ ಪರಿಸ್ಥಿತಿಯ ಅವಲೋಕನ ಮಾಡಬೇಕು ಎಂದು ತಿಳಿಸಲಾಗಿದೆ.

ಅಧಿಕಾರಿಗಳು ಕ್ಷೇತ್ರಗಳಿಗೆ ಖುದ್ದಾಗಿ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ಪರಾಮರ್ಶಿಸಬೇಕು. ರೈತರು, ತಜ್ಞರೊಂದಿಗೆ ಚರ್ಚಿಸಬೇಕು. ಕ್ಷೇತ್ರ ವೀಕ್ಷಣೆ ಜತೆಗೆ ಇತ್ತೀಚಿನ ಬೆಳವಣಿಗೆ ಆಧರಿಸಿ ಪೂರಕ ಸಲಹೆಗಳು, ನಾವೀನ್ಯತೆಗಳು ಮತ್ತು ರೈತರಿಂದ ಕಲಿತ ಇತರರಿಗೂ ಉಪಯೋಗಬಲ್ಲ ಪಾಠಗಳನ್ನು ಹಂಚಿಕೊಳ್ಳಲು ರಚನಾತ್ಮಕ ಪ್ರತಿಕ್ರಿಯೆ ಕಾರ್ಯವಿಧಾನ ರೂಪಿಸಿಕೊಳ್ಳಬೇಕು.

ಸಕಾಲಿಕ ನಿರ್ಧಾರ ತೆಗೆದುಕೊಳ್ಳುವಿಕೆಗಾಗಿ ಅಂತರ-ಸಾಂಸ್ಥಿಕ ಸಮನ್ವಯ ಮತ್ತು ಸಂವಹನವನ್ನು ಬಲಪಡಿಸಿಕೊಳ್ಳಬೇಕು/

ಬೆಳೆ ಹವಾಮಾನ ವೀಕ್ಷಣಾ ಗುಂಪಿನೊಂದಿಗೆ ನಿಕಟ ಸಮನ್ವಯ ಸಾಧಿಸಬೇಕು. ಮಾನ್ಸೂನ್ ಪ್ರಗತಿ ಮತ್ತು ಮಳೆ ವಿತರಣೆಗಾಗಿ ನೈಜ-ಸಮಯದ ಪರಿಸ್ಥಿತಿ ವಿಶ್ಲೇಷಣೆ; ಬೆಳೆ ಬಿತ್ತನೆ ಮತ್ತು ಬೆಳೆ ಸ್ಥಿತಿ ಸ್ಥಿತಿ; ಇನ್‌ಪುಟ್ ಪೂರೈಕೆ ಮತ್ತು ತುರ್ತು ಸಂಪನ್ಮೂಲ ಅಗತ್ಯತೆಗಳನ್ನು ಒದಗಿಸಲು ಸಿದ್ದರಾಗಿರಬೇಕು.

ಬರ ಹಾಗೂ ತೊಂದರೆಗೆ ಒಳಗಾಗಬಲ್ಲ ಆಯಾ ಜಿಲ್ಲೆಗಳ ಹಾಟ್‌ಸ್ಪಾಟ್‌ಗಳ ಗುರುತಿಸುವಿಕೆ ಹಾಗೂ ಅವುಗಳ ನಿರ್ವಹಣೆಗೆ ಒತ್ತು ನೀಡುವುದು. ಬರ/ಒತ್ತಡದ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಮತ್ತು ಆದ್ಯತೆ ನೀಡಿ ಮತ್ತು ಸ್ಥಳ-ನಿರ್ದಿಷ್ಟ ಹಸ್ತಕ್ಷೇಪ ಯೋಜನೆಗಳನ್ನು ಸಿದ್ಧಪಡಿಸಿ ಮತ್ತು ಅನುಷ್ಠಾನವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು.

ಬಹು-ಶ್ರೇಣಿಯ ಸಮನ್ವಯ ಕಾರ್ಯವಿಧಾನದಿಂದ ಪರಿಸ್ಥಿತಿ ನಿಭಾಯಿಸಲು ಸಹಕಾರಿಯಾಗಲಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ. ಕೃಷಿ ಜಂಟಿ ನಿರ್ದೇಶಕರು, ಕೆವಿಕೆ ಕೇಂದ್ರ ಮುಖ್ಯಸ್ಥರು ಪ್ರಮುಖವಾಗಿ ಕೆಲಸ ಮಾಡಬೇಕು. ಇದರೊಟ್ಟಿಗೆ ತಾಂತ್ರಿಕ ಮೇಲ್ವಿಚಾರಣಾ ಸರಪಳಿಯನ್ನು ಬಲಪಡಿಸಿಕೊಳ್ಳಬೇಕು. ರಾಜ್ಯ, ಜಿಲ್ಲೆ, ಬ್ಲಾಕ್. ಗ್ರಾಮ ಹಂತಕ್ಕೂ ವಿಸ್ತರಿಸಬೇಕು.

ಅಗತ್ಯ ಜ್ಞಾನವನ್ನು ಹಂಚಿಕೊಳ್ಳಲು ಬೇಕಾದ ಸಿದ್ದತೆಗಳು ಹಾಗೂ 2್ಠ47 ಮಾದರಿಯ ಪ್ರತ್ಯೇಕ ನಿರ್ವಹಣಾ ವ್ಯವಸ್ಥೆ ಹಾಗೂ ಪ್ರತಿಸ್ಪಂದನಾ ಕೋಶವನ್ನು ರಚಿಸಿ ಸಕ್ರಿಯಗೊಳಿಸಬೇಕು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries