HEALTH TIPS

ಪ್ರೇಕ್ಷಕರನ್ನು ರಂಜಿಸಲು 'ಜೀವಂತ ಸಮಾಧಿ'ಯಾಗುತ್ತಿದ್ದವನಿಗೆ ಕೈಕೊಟ್ಟ ಅದೃಷ್ಟ

ಫರಿದಾಬಾದ್‌: ಎರಡು-ಮೂರು ದಿನ ಮಣ್ಣಿನಡಿ ಇದ್ದು ಸರ್ಕಸ್ ಮಾಡಿ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಪ್ರತಿಬಾರಿ ಯಶಸ್ವಿಯಾಗುತ್ತಿದ್ದ ಯುವಕ ಈ ಬಾರಿ ಮಣ್ಣಿನಡಿಯಲ್ಲೇ ಮೃತಪಟ್ಟಿದ್ದಾರೆ. ಹರಿಯಾಣದ ನುಹ್ಜಿಲ್ಲೆಯ ಖೋರಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. 


ಈ ಸಾಹಸದಲ್ಲಿ ಪರಿಣಿತನಾಗಿದ್ದ 27 ವರ್ಷದ ದೀಪಕ್‌ನನ್ನು ಚೀಲದೊಳಗೆ ಜೀವಂತವಾಗಿ ಇರಿಸಿ ಮೂರು ದಿನ ಮಣ್ಣಿನಡಿ ಹೂತು ಹಾಕಲಾಗುತ್ತಿತ್ತು.

ಪ್ರತಿ ಬಾರಿಯೂ ಈ ಸರ್ಕಸ್‌ನಲ್ಲಿ ಆ ಯುವಕ ಗೆಲುವು ಸಾಧಿಸಿ, ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ಈ ಬಾರಿ ಮಣ್ಣಿನಡಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫರಿದಾಬಾದ್‌ನ ಗೌಂಚಿ ಗ್ರಾಮದ ನಿವಾಸಿ ದೀಪಕ್ ರೋಚಕ ಸಾಹಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಜುಲೈ 23 ರಂದು ದೀಪಕ್‌ನನ್ನು ಮಣ್ಣಿನಡಿಯಲ್ಲಿ ಹೂತುಹಾಕಲಾಗಿತ್ತು. 3 ಮೂರು ದಿನಗಳ ಬಳಿಕ ಅವರನ್ನು ಮಣ್ಣಿನಿಂದ ಮೇಲೆತ್ತಲು ಪ್ರಯತ್ನಿಸಿದಾಗ ಉಸಿರಾಡುತ್ತಿರಲಿಲ್ಲ. ಅಷ್ಟರಲ್ಲಿ ಆ ಯುವಕ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಸರ್ಕಸ್ ಆಯೋಜಕರ ವಿರುದ್ಧ ದೂರು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ಕೃಷ್ಣ ಕುಮಾರ್ ಮಾಹಿತಿ ನೀಡಿದ್ದಾರೆ.  

ಎಐ ಚಿತ್ರ







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries