ಉಪ್ಪಳ: ರಿಜಿಸ್ಟರ್ನಲ್ಲಿ ಮೃತಪಟ್ಟ ಮಹಿಳೆಯ ಪತಿಯ ಹೆಸರನ್ನು ತಿದ್ದುಪಡಿಮಾಡಿ ವಂಚನೆ ನಡೆಸಿರುವುದಾಗಿ ದೂರಲಾಗಿದೆ. ಪೈವಳಿಕೆ ಪಂಚಾಯತಿ ಕಾರ್ಯದರ್ಶಿ ಕಾಸರಗೋಡು ಎಎಸ್ಪಿ ಅಶೋಕ್ ಅಚ್ಯುತನ್ರಿಗೆ ನೀಡಿದ ದೂರಿನ ಪ್ರಕಾರ ಮಂಜೇಶ್ವರ ಪೋಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
2011ರ ನಿಧನ ರಿಜಿಸ್ಟರ್ನಲ್ಲಿ ವಂಚನೆ ನಡೆಸಿರುವುದಾಗಿ ದೂರಲಾಗಿದೆ. 2011 ಆ. 17 ರಂದು ಮೃತಪಟ್ಟ ಕಮಲ ಎಂಬವರ ಪತಿಯ ಹೆಸರು ತುಕ್ರ ಎಂದು ದಾಖಲಿಸಲಾಗಿತ್ತು. ಇದನ್ನು ತಿರುಚಿ ಗುರುವ ಎಂದು ಬರೆದು ವಂಚನೆ ನಡೆಸಲಾಗಿದೆ ಎಂಬುದಾಗಿ ದೂರಲಾಗಿದೆ. ಈ ವಂಚನೆ ನಡೆಸಿದವರು ಯಾರೆಂದು, ಯಾವ ಉದ್ದೇಶದಿಂದ ಇದನ್ನು ನಡೆಸಲಾಗಿದೆಯೆಂದು ತಿಳಿದುಬಂದಿಲ್ಲ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಆರೋಪಿಯಾಗಿ ಸೇರಿಸಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಯುತ್ತಿದೆಯೆಂದು ಪೋಲೀಸರು ತಿಳಿಸಿದ್ದಾರೆ.

