HEALTH TIPS

ವಿಶ್ವ ಪ್ರಾಣಿ ರೋಗ ದಿನಾಚರಣೆ-ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ಜಾಗೃತಿ ವಿಚಾರ ಸಂಕಿರಣ

ಕುಂಬಳೆ: ವಿಶ್ವ ಪ್ರಾಣಿ ರೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ಜಾಗೃತಿ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆ ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಅಬ್ದುಲ್ಲಕುಂಞÂ ಚೆರ್ಕಳ ನೆರವೇರಿಸಿದರು.  


ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಆಡಳಿತ ವೈದ್ಯಾಧಿಕಾರಿ ಡಾ. ಕೆ.ಪಿ. ಅನುಶ್ರೀ ಮುಖ್ಯ ಭಾಷಣ ಮಾಡಿದರು. ಕುಂಬಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಂ. ಬಲ್ಕೀಸ್, ಆರೋಗ್ಯ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಪಿ. ಖಾಲಿದ್, ವಾರ್ಡ್ ಸದಸ್ಯರಾದ ಮಂಜುನಾಥ ಆಳ್ವ ಮಡ್ವ, ಕೌಸರ್ ನೂರ್ ಜಮಾಲ್, ಸುಕೇಶ್ ಭಂಡಾರಿ, ಎ. ರಮೇಶ್ ಭಟ್, ಎ. ಕಾಂಚಾರ, ಶಾರದಾ, ಕೆ. ಅಮಿತಾ, ಕುಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವಿಜಯಕುಮಾರ್, ಜಿಲ್ಲಾ ಪಶು ರೋಗ ನಿಯಂತ್ರಣ ಅಧಿಕಾರಿ ಕೆ.ವಿ. ಗಿರೀಶ್, ತಾಂತ್ರಿಕ ಸಹಾಯಕ ಎಂ. ಚಂದ್ರನ್, ಸಹಾಯಕ ಕೃಷಿ ಅಧಿಕಾರಿ ವಿ. ಶ್ರೀಹರಿ, ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಅರುಣ್ ರಾಜ್ ಮಾತನಾಡಿದರು. ಕುಂಬಳೆ ಸಿಎಚ್‍ಸಿ ವೈದ್ಯಾಧಿಕಾರಿ ಡಾ. ಕೆ.ಯು. ಕೃಷ್ಣ ಪ್ರಸಾದ್ ಸ್ವಾಗತಿಸಿ, ಉಪ ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಪಿ.ಪಿ. ಹಸೀಬ್ ವಂದಿಸಿದರು.

ಬಳಿಕ ಜಿಲ್ಲಾ ವೈದ್ಯಕೀಯ ಕಚೇರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ಲೋರಿ ಜೋಸೆಫ್ ಮತ್ತು ಪಶುವೈದ್ಯಕೀಯ ಶಸ್ತ್ರಚಿಕಿತ್ಸಕ ಅರುಣ್ ರಾಜ್ ಪ್ರಾಣಿಗಳಿಂದ ಹರಡುವ ರೋಗಗಳ ಕುರಿತು ಜಾಗೃತಿ ವಿಚಾರ ಸಂಕಿರಣ ನಡೆಸಿದರು. ಆರೋಗ್ಯ ಕಾರ್ಯಕರ್ತರು, ಹಸಿರು ಕ್ರಿಯಾಸೇನೆ ಕಾರ್ಯಕರ್ತರು, ಕುಟುಂಬಶ್ರೀ ಕಾರ್ಯಕರ್ತರು, ಉದ್ಯೋಗ ಖಾತರಿ ಯೋಜನೆ ಕಾರ್ಯಕರ್ತರು, ಎನ್‍ಎಸ್‍ಎಸ್ ಸ್ವಯಂಸೇವಕರು ಮುಂತಾದವರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಪ್ರಪಂಚದಲ್ಲಿ ವರದಿಯಾಗುವ ಸಾಂಕ್ರಾಮಿಕ ರೋಗಗಳಲ್ಲಿ ಮೂರನೇ ಎರಡರಷ್ಟು ಪ್ರಾಣಿಜನ್ಯ ರೋಗಗಳಾಗಿವೆ. ರೇಬೀಸ್, ಲೆಪೆÇ್ಟಸ್ಪೈರೋಸಿಸ್, ಸ್ಕ್ರಬ್ ಟೈಫಸ್, ಮಂಕಿಪಾಕ್ಸ್, ನಿಪಾ, ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ವೆಸ್ಟ್ ನೈಲ್ ಜ್ವರವು ಕೇರಳದಲ್ಲಿ ಸಾಮಾನ್ಯವಾಗಿ ವರದಿಯಾಗುವ ಪ್ರಾಣಿಜನ್ಯ ರೋಗಗಳಾಗಿವೆ.

ಮಾನವರು ಮತ್ತು ಪ್ರಾಣಿಗಳು ತಮ್ಮ ವಾಸಸ್ಥಳ ಮತ್ತು ಕಾಡುಗಳಲ್ಲಿ ಪರಸ್ಪರ ಸಂವಹನ ನಡೆಸಿದಾಗ, ಪ್ರಾಣಿಗಳಿಂದ ಬರುವ ವೈರಸ್‍ಗಳು, ಬ್ಯಾಕ್ಟೀರಿಯಾಗಳು ಮತ್ತು ಪರಾವಲಂಬಿಗಳಂತಹ ರೋಗಕಾರಕಗಳು ಮನುಷ್ಯರನ್ನು ತಲುಪಿ ರೋಗಗಳನ್ನು ಉಂಟುಮಾಡುತ್ತವೆ. ಮಾನವರು ಮತ್ತು ಇತರ ಜೀವಿಗಳ ನಡುವಿನ ಪರಸ್ಪರ ಕ್ರಿಯೆಗಳು ಹೆಚ್ಚಾಗಿ ಅನಿವಾರ್ಯ. ಕೆಲಸ, ಆಹಾರ, ಪಶುಸಂಗೋಪನೆ, ಶಿಕ್ಷಣ, ಮನರಂಜನೆ ಮತ್ತು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಂತಹ ಹಲವು ಕ್ಷೇತ್ರಗಳಲ್ಲಿ ಮಾನವರು ಜೀವಿಗಳೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಸಂವಹನ ನಡೆಸುತ್ತಾರೆ. ಆದ್ದರಿಂದ, ಪ್ರಾಣಿಜನ್ಯ ರೋಗಗಳ ಬಗ್ಗೆ ಜ್ಞಾನ ಮಾತ್ರ ಅವುಗಳನ್ನು ತಡೆಯಬಹುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries