ಯಕ್ಷರಂಗದಲ್ಲಿ ಮೂರುವರೆ ದಶಕ
ಶ್ರೀಧರ ಭಟ್ ಕಾಸರಕೋಡ್ ಅವರು ಸಹಜ ಹಾಸ್ಯ, ತಾಳ್ಮೆ, ಸಮಯಪ್ರಜ್ಞೆ ಹೊಂದಿದ್ದ ಇವರು, ಪ್ರೇಕ್ಷಕರೊಂದಿಗೆ ಒಡನಾಟ ಹೊಂದಿರುವ ಕಲಾವಿದರಾಗಿದ್ದರು. ಶ್ರೀಧರ್ ಭಟ್ ಅವರು ಜೋಕುಮಾರ ಸ್ವಾಮಿ, ಅಜ್ಜಿಯ ಪಾತ್ರ, ಸೂತ್ರಧಾರಿ ಸೇರಿದಂತೆ ಅನೇಕ ಪಾತ್ರಗಳಿಂದ ಮೂರುವರೆ ದಶಕಗಳ ಕಾಲ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದಾರೆ.
ಶ್ರೀಧರ ಭಟ್ ಅವರು ಗುಂಡಬಾಳ, ಮಂದಾರ್ತಿ, ಸಾಲಿಗ್ರಾಮ, ಜಲವಳ್ಳಿ ಮೇಳದಲ್ಲಿ ಹಾಸ್ಯಕಲಾವಿದರಾಗಿದ್ದರು. ಇನ್ನಿತರ ಹವ್ಯಾಸಿ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ವೇಷ ಧರಿಸಿ ಉತ್ತಮ ಕಲಾವಿದರೆನಿಸಿಕೊಂಡಿದ್ದರು. ಮೂಲತಃ ಕಾಸರಕೋಡಿನವರಾಗಿ, ಪ್ರಸುತ್ತ ಸಾಲ್ಕೋಡ್ ಗ್ರಾಮದ ಮುಲ್ಲೆಮಕ್ಕಿಯಲ್ಲಿ ವಾಸವಾಗಿದ್ದರು.
ಮೃತರು ಪತ್ನಿ ,ಇರ್ವರು ಪುತ್ರರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮೃತರಿಗೆ ಯಕ್ಷಗಾನ ಕಲಾವಿದರಾದ ವಿದ್ಯಾದರ ಜಲವಳ್ಳಿ, ಶಿವಾನಂದ ಹೆಗಡೆ ಕೆರೆಮನೆ, ಶಂಕರ ಹೆಗಡೆ ನಿಲ್ಕೋಡ್, ಕಲಾ ಪೋಷಕರಾದ ಶಿವಾನಂದ ಹೆಗಡೆ ಕಡತೋಕಾ, ರಾಜು ಭಂಡಾರಿ, ನಾಗರಾಜ ಹೆಗಡೆ ಖಾಸ್ಕಂಡ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

