HEALTH TIPS

ಅವೈಜ್ಞಾನಿಕ ಒಳಚರಂಡಿ ಸಂಸ್ಕರಣೆ: ಉಪ್ಪಳದ ಹೋಟೆಲ್ ಗೆ ದಂಡ

ಉಪ್ಪಳ: ಕೊಳಚೆ ನೀರು ಸಂಸ್ಕರಣಾ ಕ್ಷೇತ್ರದಲ್ಲಿ ಕಾನೂನು ಉಲ್ಲಂಘನೆಯ ತನಿಖೆ ನಡೆಸುವ ಜಿಲ್ಲಾ ಜಾರಿ ದಳವು, ಉಪ್ಪಳದ ಹೋಟೆಲ್ ನಿಂದ ಬರುವ ತ್ಯಾಜ್ಯ ನೀರನ್ನು ಅವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ ಎಂದು ಪತ್ತೆಮಾಡಿ ಹೋಟೆಲ್ ಮಾಲೀಕರಿಗೆ 25,000 ರೂ. ದಂಡ ವಿಧಿಸಲಾಗಿದೆ. 


ರೆಸ್ಟೋರೆಂಟ್‍ನ ಹಿಂಭಾಗದಲ್ಲಿರುವ ಮಾಲೀಕರ ಖಾಲಿ ಜಾಗಕ್ಕೆ ಒಳಚರಂಡಿ ನೀರನ್ನು ಚರಂಡಿಗೆ ಬಿಡಲಾಗಿದ್ದು, ಹತ್ತಿರದ ಕ್ವಾರ್ಟರ್ಸ್ ಮತ್ತು ಇತರ ಪ್ರದೇಶಗಳಿಗೆ ದುರ್ವಾಸನೆ ಬರುತ್ತಿತ್ತು. ಜೊತೆಗಿದು ಸೊಳ್ಳೆಗಳು ಹರಡಲು ಕಾರಣವಾಗಿವೆ. ಎರಡು ವಾರಗಳಲ್ಲಿ ಸೋಕ್ ಪಿಟ್ ಅಳವಡಿಸಿ ತ್ಯಾಜ್ಯ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲು ಮಾಲೀಕರಿಗೆ ಸೂಚಿಸಲಾಗಿದೆ. ಉದುಮದ ರೆಸಾರ್ಟ್‍ನಲ್ಲಿ ನಡೆಸಿದ ತಪಾಸಣೆಯಲ್ಲಿ, ನದಿ ದಂಡೆಯಲ್ಲಿ ಸೊಪ್ಪನ್ನು ಹಾಕಿ ದುರ್ವಾಸನೆ ಬೀರಿದ್ದಕ್ಕಾಗಿ ಮಾಲೀಕರಿಗೆ 15,000 ರೂ. ದಂಡ ವಿಧಿಸಲಾಗಿದೆ. ಜಿಲ್ಲಾ ಜಾರಿ ದಳದ ನಾಯಕ ಕೆ.ವಿ. ಮುಹಮ್ಮದ್ ಮದನಿ, ಸ್ಕ್ವಾಡ್ ಸದಸ್ಯ ವಿ.ಎಂ. ಜೋಸ್, ಆರೋಗ್ಯ ನಿರೀಕ್ಷಕ ಕೆ. ರಜನಿ, ಎಂ. ರಾಜೇಶ್ ನೇತೃತ್ವ ವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries