ಪಂಪಾ: ಭಾರೀ ಮಳೆ ಮತ್ತು ನೀರಿನ ಪ್ರಮಾಣ ಹೆಚ್ಚಿರುವ ಪಂಪಾ ನದಿಯು ಉಕ್ಕೇರುತ್ತಿದ್ದು< ಈ ಲ್ಲಿಹಿನ್ನೆಲೆಯಲ್ಲಿ, ಸಾಧ್ಯವಾದರೆ ಶಬರಿಮಲೆಗೆ ಭೇಟಿ ನೀಡುವುದನ್ನು ತಪ್ಪಿಸಲು ತಿರುವಾಂಕೂರು ದೇವಸ್ವಂ ಮಂಡಳಿಯು ಭಕ್ತರನ್ನು ವಿನಂತಿಸಿದೆ.
ಆಗಸ್ಟ್ 2 ಮತ್ತು 3 ರಂದು ಶಬರಿಮಲೆ ದೇವಸ್ಥಾನವು ನಿರಪುತ್ತರಿ ಸಮಾರಂಭಗಳಿಗಾಗಿ ತೆರೆಯಲ್ಪಡುವ ಹಿನ್ನೆಲೆಯಲ್ಲಿ ದೇವಸ್ವಂ ಮಂಡಳಿಯು ಭಕ್ತರನ್ನು ಯಾತ್ರೆ ಮುಂದೂಡುವಂತೆ ವಿನಂತಿಸಿದೆ.
ಆಗಸ್ಟ್ ತಿಂಗಳಿನಲ್ಲಿಯೇ ಸಿಂಹಮಾಸ ಪೂಜೆಗಳು (ಆಗಸ್ಟ್ 16 ರಿಂದ 21) ಮತ್ತು ಓಣಂ (ಆಗಸ್ಟ್ 24 ರಿಂದ 28) ಕ್ಕೆ ಸಂಬಂಧಿಸಿದ ಪೂಜೆಗಳಿಗಾಗಿ ಶಬರಿಮಲೆ ದೇವಸ್ಥಾನವನ್ನು ತೆರೆಯಲಾಗುತ್ತಿದ್ದು, ಭಕ್ತರು ದರ್ಶನಕ್ಕಾಗಿ ಈ ಸಮಯವನ್ನು ಆಯ್ಕೆ ಮಾಡಬಹುದು ಎಂದು ಮಂಡಳಿಯು ಗಮನಸೆಳೆದಿದೆ.
ನಿರಂತರ ಭಾರೀ ಮಳೆ ಮತ್ತು ಭೂಕುಸಿತದ ಸಾಧ್ಯತೆಯಿಂದಾಗಿ ಭಕ್ತರಿಗೆ ಈ ವಿನಂತಿಯನ್ನು ಮಾಡಲಾಗುತ್ತಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ವಿವರಿಸಿದೆ.
ಏತನ್ಮಧ್ಯೆ, ರಾಜ್ಯದಾದ್ಯಂತ ಭಾರೀ ಮಳೆ ಮುಂದುವರೆದಿದೆ. 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 5 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಇದೆ. ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ಎರ್ನಾಕುಳಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಇದೆ.

