HEALTH TIPS

ಹೈಕೋರ್ಟ್ ಮೂಲಕ ವಿಚ್ಛೇದನ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ಮತ್ತು ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪೂಜೆಗಳನ್ನು ಮಾಡುವುದಾಗಿ ಭರವಸೆ ನೀಡಿ ಗೃಹಿಣಿಯಿಂದ ಲಕ್ಷಗಟ್ಟಲೆ ಸುಲಿಗೆ: ಆರೋಪಿಯನ್ನು ಬಂಧಿಸಿದ ಕಾಸರಗೋಡು ಕ್ರೈಂ ಬ್ರಾಂಚ್

ಕಾಸರಗೋಡು: ಹೈಕೋರ್ಟ್ ಮೂಲಕ ವಿಚ್ಛೇದನ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವುದಾಗಿ ಮತ್ತು ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪೂಜೆಗಳನ್ನು ಮಾಡುವುದಾಗಿ ಭರವಸೆ ನೀಡಿ ಗೃಹಿಣಿಯಿಂದ ಲಕ್ಷಗಟ್ಟಲೆ ಸುಲಿಗೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. 


ಕೊಟ್ಟಾಯಂನ ಅನಿಕಾಡ್ ಮೂಲದ ಆಂಟನಿ ವಿನ್ಸೆಂಟ್ ಅವರನ್ನು ಕಾಸರಗೋಡು ಸೈಬರ್ ಕ್ರೈಮ್ ಪೋಲೀಸರು ಬಂಧಿಸಿದ್ದಾರೆ. ಅವರು ಕಾಸರಗೋಡಿನ ಉದುಮ ಮೂಲದ ಮಹಿಳೆಯಿಂದ ಹಣ ಸುಲಿಗೆ ಮಾಡಿದ್ದಾರೆ. ಘಟನೆ ಸೆಪ್ಟೆಂಬರ್ 17, 2025 ಮತ್ತು ಜನವರಿ 2, 2026 ರ ನಡುವೆ ನಡೆದಿದೆ.

ಪತಿಯಿಂದ ಬೇರ್ಪಟ್ಟ ಮಹಿಳೆಯನ್ನು ಫೇಸ್‍ಬುಕ್ ಮೂಲಕ ಭೇಟಿಯಾದ ಆರೋಪಿ, ನಿರಂತರವಾಗಿ ಪೋನ್ ಮತ್ತು ವಾಟ್ಸಾಪ್ ಮೂಲಕ ಸಂಪರ್ಕಿಸಿ ಅವರ ವಿಶ್ವಾಸ ಗಳಿಸಿದ್ದಾನೆ.

ನಂತರ, ಆರೋಪಿಯು ವಿಚ್ಛೇದನ ಪ್ರಕ್ರಿಯೆಯನ್ನು ಹೈಕೋರ್ಟ್ ಮೂಲಕ ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಮತ್ತು ವಿಶೇಷ ಪೂಜೆಗಳನ್ನು ಮಾಡುವ ಮೂಲಕ ಆಕೆಯ ಜೀವನದಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಭರವಸೆ ನೀಡಿದ. ಇದನ್ನೇ ನೆಪವಾಗಿಟ್ಟುಕೊಂಡು ಆರೋಪಿಯು ಮಹಿಳೆಯ ವಿವಿಧ ಬ್ಯಾಂಕ್ ಖಾತೆಗಳಿಂದ 13,16,731 ರೂ.ಗಳನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ದೂಎಲ್ಲಿ ಉಲ್ಲೇಖಿಸಲಾಗಿದೆ.  







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries