ಕಾಸರಗೋಡು: ಸರ್ಕಾರದ ನೂರು ದಿನಗಳ ಕ್ರಿಯಾ ಯೋಜನೆಯ ಅಂಗವಾಗಿ, ನ್ಯಾಷನಲ್ ಅಡ್ವೆಂಚರ್ ಅಕಾಡೆಮಿಯ ನೇತೃತ್ವದಲ್ಲಿ ರಾಜ್ಯ ಯುವ ಕಲ್ಯಾಣ ಮಂಡಳಿಯು ಟ್ರೆಕ್ಕಿಂಗ್ ಶಿಬಿರಗಳನ್ನು ಆಯೋಜಿಸುತ್ತಿದೆ. ಈ ಶಿಬಿರಗಳು ಸೆಪ್ಟೆಂಬರ್ 8 ರಂದು ಕಾಸರಗೋಡಿನ ರಾಣಿಪುರಂನಲ್ಲಿ ಹಾಗೂ ಸೆಪ್ಟೆಂಬರ್ 16 ಮತ್ತು 17 ರಂದು ಇಡುಕ್ಕಿ ಜಿಲ್ಲೆಯ ಮೀಶಪ್ಪುಲಿಮಲೆಯಲ್ಲಿ ನಡೆಯಲಿವೆ.
18 ರಿಂದ 35 ವರ್ಷ ವಯಸ್ಸಿನ ಯುವಕ-ಯುವತಿಯರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ರಾಣಿಪುರಂ ಟ್ರೆಕ್ಕಿಂಗ್ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿಯಿರುವವರು ಸೆಪ್ಟೆಂಬರ್ 2 ರೊಳಗೆ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿಯಿರುವವರು ಸೆಪ್ಟೆಂಬರ್ 8 ರೊಳಗೆ ವಯಸ್ಸಿನ ದೃಢೀಕರಣ ಪತ್ರದೊಂದಿಗೆ ಅರ್ಜಿಗಳನ್ನು ಇ-ಮೇಲ್ (ksgd.ksywb@kerala.gov.in)ವಿಳಾಸಕ್ಕೆ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು 1,000 ನೋಂದಣಿ ಶುಲ್ಕವನ್ನು ಪಾವತಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9645682799, 9895314639)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

