ಮಧೂರು: ಉಳಿಯತಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ವಿಶೇಷ ವಿಕಲಚೇತನ ಶಾಲೆಯಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಮಕ್ಕಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಕಣಿವು ಪಾಲಿಯೇಟಿವ್ ಸೊಸೈಟಿಯ ಸದಸ್ಯರು ಈ ಶಿಬಿರಕ್ಕೆ ನೇತೃತ್ವ ನೀಡಿದರು.ಪಾಲಿಯೇಟಿವ್ ಸೊಸೈಟಿ ಕಾರ್ಯದರ್ಶಿ ಕೆ ಕಮಲಾಕ್ಷ, ಸದಸ್ಯರಾದ ಕೆ.ಗಂಗಾಧರನ್, ಅಶೋಕನ್ ಕೆ ಸಿ, ಡಿ.ಕೆ ಮಾಧವನ್, ಸಿಂಧು, ರಾಧ ಮತ್ತು ಅಧ್ಯಾಪಕಿಯರಾದ ಅಶ್ವತಿ, ಚಿತ್ರಾ ಭಾಗವಹಿಸಿದರು. ಪ್ರಾಂಶುಪಾಲ ಉದಯಕುಮಾರ್ ಸ್ವಾಗತಿಸಿ, ಅಧ್ಯಾಪಕಿ ಭವ್ಯಶ್ರೀ ವಂದಿಸಿದರು.



