ಕಾಸರಗೋಡು: ಬಿರುಸಿನ ಮಳೆ ಹಿನ್ನೆಲೆಯಲ್ಲಿ ನೆರೆ ಹಾಗೂ ಭೂಕುಸಿತದಿಂದ ಸಂತ್ರಸ್ತರಾಗಿರುವವರಿಗೆ ವಾಸ್ತವ್ಯಕಲ್ಪಿಸಲು ಜಿಲ್ಲೆಯಲ್ಲಿ ಒಟ್ಟು ಆರು ಶಿಬಿರಗಳನ್ನು ಆರಂಭಿಸಲಾಗಿದೆ. ಇವುಗಳಲ್ಲಿ ತಲಾ ಮೂರು ವೆಳ್ಳರಿಕುಂಡು ಹಾಗೂ ಹೊಸದುರ್ಗ ತಾಲೂಕಿನಲ್ಲಿವೆ. ಈ ಶಿಬಿರಗಳಲ್ಲಿ ಒಟ್ಟು 88 ಕುಟುಂಬಗಳ 325 ಮಂದಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ 132 ಪುರುಷರು, 143 ಮಹಿಳೆಯರು ಮತ್ತು 50 ಮಂದಿ ಮಕ್ಕಳಿದ್ದಾರೆ. ಪಲವಯಲ್, ಕಿನಾನೂರ್-ಕರಿಂದಳಂ, ಪೆರೋಲ್ ಮತ್ತು ಕ್ಲೈಕೋಡ್ ಗ್ರಾಮಗಳಲ್ಲಿ ಈ ಶಿಬಿರ ತೆರೆಯಲಾಗಿದೆ.
ತಯ್ಯಾನಿ ಸರ್ಕಾರಿ ಪ್ರೌಢಶಾಲೆ, ದೇಶಸೇವಾನಿ ಗ್ರಂಥಾಲಯ, ಚುಳ್ಳಿಕ್ಕರ ಎಲ್ಪಿ ಶಾಲೆ, ಚಾತಮತ್ ದೇವಸ್ಥಾನದ ಸಭಾಂಗಣ, ಕ್ಲೈಕೋಡ್ ನಾಯನಾರ್ ಮಂದಿರಂ, ಜಿಎಲ್ಪಿ ಶಾಲೆ ವೆಲ್ಲಾಟ್ ಪ್ರದೇಶದಲ್ಲಿ ಶಿಬಿರಗಳು ಚಟುವಟಿಕೆ ನಡೆಸುತ್ತಿದೆ.



