ಕಾಸರಗೋಡು: ನಗರದಲ್ಲಿ ಜಿಲ್ಲಾ ಮಟ್ಟದ ಓಣಂ ಆಚರಣೆಯನ್ನು ವ್ಯಾಪಕವಾಗಿ ಆಯೋಜಿಸಲಾಗುವುದು. ಇದರ ಭಾಗವಾಗಿ, ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯನ್ನು ರಚಿಸಲಾಗಿದ್ದು, ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷರಾಗಿ ಮತ್ತು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಸಂಚಾಲಕರಾಗಿ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ. ವಿವಿಧ ಉಪಸಮಿತಿಗಳನ್ನು ಸಹ ರಚಿಸಲಾಗಿದೆ.
ನಿನ್ನೆ ಶಾಸಕ ಕಲ್ಲಟ್ರ್ರ ಮಾಹಿನ್ ಅಧ್ಯಕ್ಷತೆಯಲ್ಲಿ ಕಾಸರಗೋಡು ಸರ್ಕಾರಿ ಅತಿಥಿ ಗೃಹ ಸಭಾಂಗಣದಲ್ಲಿ ನಡೆದ ಸಭೆಯು ಓಣಂ ಆಚರಣೆಯ ಸಿದ್ಧತೆಗಳಿಗೆ ಪೂರ್ವಭಾವಿ ರೂಪ ನೀಡಿತು. ಕಾಸರಗೋಡು ವ್ಯಾಪಾರಿಗಳ ಸಂಘದ ಸಹಯೋಗದೊಂದಿಗೆ ಮೆಗಾ ಹೂವಿನ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಮಹಿಳೆಯರು ಮತ್ತು ಪುರುಷರಿಗಾಗಿ ಟಗ್ ಆಫ್ ವಾರ್ ಸ್ಪರ್ಧೆ, ಪುಲಿಕಲ್ಲಿ ಮತ್ತು ತಿರುuಟಿಜeಜಿiಟಿeಜವತಿರ ಕಲಿಗಳನ್ನು ಸಹ ಆಯೋಜಿಸಲಾಗುವುದು. ಕಾಸರಗೋಡು ನಗರವನ್ನು ಅತ್ಯುತ್ತಮ ರೀತಿಯಲ್ಲಿ ದೀಪಗಳಿಂದ ಅಲಂಕರಿಸುವ ವ್ಯಾಪಾರ ಸಂಸ್ಥೆಗಳಿಗೆ ನಗದು ಪ್ರಶಸ್ತಿಗಳನ್ನು ನೀಡಲಾಗುವುದು.
ಓಣಂ ಆಚರಣೆಯ ಯಶಸ್ಸಿಗೆ ಎಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಕಲ್ಲಟ್ರ ಮಾಹಿನ್ ಹೇಳಿದರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಶಾಹಿನಾ ಸಲೀಂ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಾ ಕುಂಞÂ ಚೆರ್ಕಳ, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಅಜಕೋಡ್, ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಜನನಿ, ಕಾಸರಗೋಡು ನಗರಸಭೆ ಉಪಾಧ್ಯಕ್ಷೆ ಕೆ.ಎಂ. ಹನೀಫಾ, ಮುನಿ ಸಿಪಾಲ್ ಸ್ಥಾಯಿ ಸಮಿತಿ ಅಧ್ಯಕ್ಷರು, ಬದಿಯಡ್ಕ ಗ್ರಾ.ಪಂ.ಸದಸ್ಯ ಮಾಹಿನ್ ಕೇಳೋಟ್ ಮತ್ತಿತರರು ಮಾತನಾಡಿದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎ. ನಸೀಬ್ ಸ್ವಾಗತಿಸಿ, ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ ಕಾರ್ಯದರ್ಶಿ ಜಿ.ಕೆ. ಜಿಜೇಶ್ ಕುಮಾರ್ ವಂದಿಸಿದೆರು.



