ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆಯು ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು ಶನಿವಾರ ಬಡಗುತಿಟ್ಟು ಯಕ್ಷಗಾನ ಬಯಲಾಟ ಭಕ್ತ ಚಂದ್ರಹಾಸ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಪ್ರಸನ್ನ ಭಟ್ ಬಾಳ್ಕಲ್, ಸುನಿಲ್ ಭಂಡಾರಿ ಕಡತೋಕ, ನಯನ ಕುಮಾರ ನಿಟ್ಟೂರು ಹಾಗೂ ಮುಮ್ಮೇಳದಲ್ಲಿ ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ, ಜಲವಳ್ಳಿ ವಿದ್ಯಾಧರ ರಾವ್, ಚಿಟ್ಟಾಣಿ ಕಾರ್ತಿಕ ಹೆಗಡೆ, ಗುಂಡುಬಾಳ ವಿನಾಯಕ, ಹಾಸ್ಯದಲ್ಲಿ ರವೀಂದ್ರ ದೇವಾಡಿಗ, ಸ್ತ್ರೀವೇಷದಲ್ಲಿ ಕುಂಕಿಪಾಲ ನಾಗರಾಜ ಭಟ್ ಹಾಗೂ ಪುರುಷೋತ್ತಮ ಸಾಗರ ಸಹಕರಿಸಿದರು.

.jpg)
.jpg)
.jpg)
.jpg)
