ಅಮರಾವತಿ: ಆಂಧ್ರಪ್ರದೇಶ ರಾಜ್ಯದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಅಳವಡಿಸುವ ಎಲ್ಲ ಪೆಂಡಲ್ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಬುಧವಾರ(ಸೆ.9) ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಾರಾ ಲೋಕೇಶ್, 'ಈ ಗಣೇಶ ಚತುರ್ಥಿಯ ವೇಳೆ, ಆಂಧ್ರಪ್ರದೇಶದಲ್ಲಿರುವ ಎಲ್ಲ ಗಣೇಶ ಪೆಂಡಲ್ಗಳಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ತಿಳಿಸಲು ನನಗೆ ಖುಷಿಯಾಗುತ್ತಿದೆ' ಎಂದು ಹೇಳಿದ್ದಾರೆ.
ಸಮುದಾಯಗಳಿಗೆ ಸಹಾಯ ಮಾಡುವ ಮತ್ತು ಹಬ್ಬದ ಸಂಭ್ರಮಾಚರಣೆಯನ್ನು ಇನ್ನಷ್ಟು ವರ್ಣರಂಜಿತವಾಗಿಸುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ. ಭಗವಾನ್ ಗಣೇಶನು ಪ್ರತಿಯೊಂದು ಕುಟುಂಬಕ್ಕೂ ಸಮೃದ್ಧಿ, ಸಂತೋಷ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಆರೈಸಿದ್ದಾರೆ.
ಈ ಬಾರಿಯ ಗಣೇಶ ಚತುರ್ಥಿಯು ಸೆ.14ರಿಂದ ಆರಂಭವಾಗಲಿದೆ.
I am happy to announce that this #GaneshChaturthi, all Ganesh pandals across #AndhraPradesh will be provided free electricity. This is a major festive initiative by our government to support communities celebrating across the state and make the celebrations even more vibrant. Show more

