ಕಾಸರಗೋಡು: ಪಾಲಕ್ಕಾಡ್ ರೈಲು ವಿಭಾಗದಿಂದ ಮಂಗಳೂರು ರೈಲು ನಿಲ್ದಾಣವನ್ನು ವಿಭಜಿಸಿ ಮೈಸೂರು ರೈಲು ವಿಭಾಗಕ್ಕೆ ವರ್ಗಾಯಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಸರಗೋಡು ರೈಲ್ವೆ ನಿಲ್ದಾಣ ವಠಾರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಸರಗೋಡು ರೈಲು ನಿಲ್ದಾಣ ವಠಾರದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಕೆಪಿಸಿಸಿ ಕೋಶಾಧಿಕಾರಿ ವಿ.ಎ. ನಾರಾಯಣನ್ ಉದ್ಘಾಟಿಸಿ ಮಾಥನಾಡಿದರು.


