ಉಪ್ಪಳ: ಪೈವಳಿಕೆ ಪಂಚಾಯತಿಯ ಸಜಂಕಿಲ ಹಾಗೂ ಸರ್ಕುತ್ತಿ ಗುಂಪೆ ಜಂಕ್ಷನ್ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ನೂತನವಾಗಿ ನಿರ್ಮಿಸಿದ ಬಸ್ ತಂಗುದಾಣವನ್ನು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉದ್ಘಾಟಿಸಲಾಯಿತು.
ಸಜಂಕಿಲದಲ್ಲಿ ಲಕ್ಷ್ಮೀ ನಾರಾಯಣ ಭಟ್, ಸರ್ಕುತ್ತಿಯಲ್ಲಿ ಗ್ರಾ.ಪಂ. ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಉದ್ಘಾಟಿಸಿದರು. ಪಂಚಾಯತಿ ಸದಸ್ಯ ವಿಶ್ವೇಶ್ವರ, ಸಂತೋಷ್ ಆವಳ ಸಾಗು, ರಕ್ಷಿತ್ ಅವಳ ಸಾಗು, ಸೂರ್ಯನಾರಾಯಣ ಭಟ್ ಆವಳ ಮಠ, ಉದಯ ಸರ್ಕುತ್ತಿ, ವಸಂತ ಬೆಳ್ಚಪ್ಪಾಡ್ ಸರ್ಕುತ್ತಿ, ಚಂದ್ರಶೇಖರ ಮುಂಚಿಕ್ಕಾನ, ಪ್ರಕಾಶ್ ಆಟಿಕುಕ್ಕೆ, ಕೆ.ಎಸ್ ಮೊಯ್ದೀನ್, ಬಾಲಕೃಷ್ಣ.ಸಿ, ಐತ್ತಪ್ಪ ಪಂಜ ಮೊದಲಾದವರು ಉಪಸ್ಥಿತರಿದ್ದರು.

.jpg)
.jpg)
