ಕೊಟ್ಟಾಯಂ: ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರು ಎನ್.ಎಸ್.ಎಸ್(ನಾಯರ್ ಸರ್ವಿಸ್ ಸೊಸೈಟಿ) ಪ್ರಧಾನ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ಅವರನ್ನು ಭಾನುವಾರ ಭೇಟಿಯಾದರು. ಸುಕುಮಾರನ್ ನಾಯರ್ ಅವರು ಸಚಿವರನ್ನು ಶಾಲು ಹೊದಿಸಿ ಬರಮಾಡಿಕೊಂಡರು.
ಬೆಳಿಗ್ಗೆ ಕೊಟ್ಟಾಯಂನಲ್ಲಿ ಆಯೋಜಿಸಲಾದ ಶಿಕ್ಷಣ ಇಲಾಖೆಯ ಅದಾಲತ್ನಲ್ಲಿ ಭಾಗವಹಿಸಿದ ನಂತರ ಕೊಟ್ಟಾಯಂನಲ್ಲಿ ಮುಂದಿನ ಕಾರ್ಯಕ್ರಮಕ್ಕೆ ಹೋಗುವ ದಾರಿಯಲ್ಲಿ ಈ ಭೇಟಿ ನಡೆಯಿಯಿತು. ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಎನ್. ಶಂಸುದ್ದೀನ್ ಅವರು ಎನ್.ಎಸ್.ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.
ಮುಸ್ಲಿಂ ಸಮುದಾಯ ಮತ್ತು ಮುಸ್ಲಿಂ ಲೀಗ್ ಜೊತೆ ಎನ್.ಎಸ್.ಎಸ್ ಎಂದಿಗೂ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸಿಲ್ಲ ಮತ್ತು ಇಲ್ಲಿಯವರೆಗೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿಲ್ಲ ಎಂದು ಜಿ ಸುಕುಮಾರನ್ ನಾಯರ್ ಹೇಳಿದರು.ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗಿದೆ ಎಂದು ಸಚಿವ ಎನ್. ಶಂಸುದ್ದೀನ್ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮುಸ್ಲಿಂ ಲೀಗ್ನ ಒತ್ತಡ ತಂತ್ರಗಳನ್ನು ಎನ್.ಎಸ್.ಎಸ್ ಈ ಹಿಂದೆ ತೀವ್ರವಾಗಿ ಟೀಕಿಸಿತ್ತು.
ಶಿಕ್ಷಣ ಇಲಾಖೆಯನ್ನು ಲೀಗ್ಗೆ ಹಂಚಿಕೆ ಮಾಡುವುದಕ್ಕೆ ಸಂಘಟನೆಯು ಸಾರ್ವಜನಿಕವಾಗಿ ತನ್ನ ವಿರೋಧವನ್ನು ವ್ಯಕ್ತಪಡಿಸಿತ್ತು. ಇಂತಹ ಬಲವಾದ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಸಚಿವರ ಭೇಟಿಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ.

