ಕಾಸರಗೋಡು: ನಕಲಿ ಚಿನ್ನಾಭರಣ ಅಡವಿರಿಸಿ 11,44,000 ರೂ. ಸಾಲ ತೆಗೆದು ವಂಚಿಸಿರುವ ಬಗ್ಗೆ ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಕಾಸರಗೋಡು ಬ್ರಾಂಚ್ ಮೆನೇಜರ್ ಯು.ಪಿ. ಕಿರಣ್ ಕುಮಾರ್ ನೀಡಿದ ದೂರಿನಂತೆ ಕಾಸರಗೋಡು ನಗರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಪೆÇಯಿನಾಚಿ ಚೆರುಕರ ನಿವಾಸಿ ಅಬ್ದುಲ್ ಮಜೀದ್ (52)ನ ವಿರುದ್ಧ ಈ ಕೇಸು ದಾಖಲಿಸಲಾಗಿದೆ. 2026 ಫೆಬ್ರವರಿ 25ರಂದು ನಕಲಿ ಎನ್ನಲಾದ 108.407 ಗ್ರಾಂ ತೂಕದ ಎರಡು ಬಳೆಗಳು, ಒಂದು ನೆಕ್ಲೇಸ್ ಎಂಬಿವುಗಳನ್ನು ಅಡವಿರಿಸಿ ಹಣ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

