ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ದೀಪಾವಳಿ ಆಚರಣೆ
ಬದಿಯಡ್ಕ: ಎಡನೀರು ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ತುಳುನಾಡಿನಲ್ಲಿ ಹಿಂದಿನ ಕಾಲದಿಂದಲೇ ಆಚರಿಸಿಕೊಂಡು ಬರುತ್ತಿರುವ ಬಲಿಯೇಂದ್ರ ಹಬ್ಬದ ಜನಪದ ರೂಪವನ್ನು ಮಕ್ಕಳು ವೇದಿಕೆಯಲ್ಲಿ ಪಾಡ್ದನ ನೃತ್ಯಗಳೊಂದಿಗೆ ಪ್ರದಶರ್ಿಸಿದರು.ಬಲಿಯೇಂದ್ರನ ಕಥೆ ಆಧರಿತ ನಾಟಕ 'ರಾಜ ಮಹಾಬಲಿ'ಯನ್ನು ಮಕ್ಕಳು ಆಡಿ ತೋರಿಸಿದರು. ಈ ಸಂದರ್ಭದಲ್ಲಿ ಬಲಿಯೇಂದ್ರನ ರೂಪವನ್ನು ಮಾಡಿ ಪ್ರದಶರ್ಿಸಲಾಯಿತು. ಹಣತೆಗಳ ಬೆಳಕಿನೊಂದಿಗೆ ನೆಲಚಕ್ರ ನಕ್ಷತ್ರಕಡ್ಡಿಗಳು ಮಕ್ಕಳ ಕಣ್ಮನಗಳನ್ನು ತಣಿಸಿದವು.
ಮಾಚರ್್ ತಿಂಗಳಲ್ಲಿ ಶಾಲೆಯಿಂದ ಬೀಳ್ಕೊಡಲಿರುವ ಏಳನೇ ತರಗತಿ ಕನ್ನಡ ಮಕ್ಕಳು ತಾವು ಶಾಲೆಗೆ ಕೊಡಲುದ್ದೇಶಿಸಿದ ಏಂಪ್ಲಿಫಯರ್ನ್ನು ಈ ಸಂದರ್ಭದಲ್ಲಿ ದೀಪಾವಳಿ ಉಡುಗೊರೆಯಾಗಿ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ಲ ಕುಂಜಾರು ಹಾಗೂ ಮುಖ್ಯೋಪಾಧ್ಯಾಯ ಯತೀಶ್ ಕುಮಾರ್ ರೈ ಮಕ್ಕಳ ಕೊಡುಗೆಯನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.



