ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 26, 2017
ನ.1 ರಂದು ಕರಾಳ ದಿನ ಆಚರಿಸಲು ತುಳುನಾಡ ರಕ್ಷಣಾ ವೇದಿಕೆ ಕರೆ
ಕಾಸರಗೋಡು: ಬಾಕರ್ೂರಿನಿಂದ ಕಾಸರಗೋಡಿನ ನೀಲೇಶ್ವರದ ತನಕದ ತುಳುನಾಡಿನ ಏಕೀಕರಣಕ್ಕಾಗಿ ಮಹಾಜನ ವರದಿ ಜಾರಿಯಾಗಬೇಕೆಂದು ಕೇಂದ್ರ-ರಾಜ್ಯ ಸರಕಾರಗಳಲ್ಲಿ ಒತ್ತಾಯಿಸಲು ನವಂಬರ 1 ರಂದು ಕರಾಳ ದಿನ ಆಚರಿಸಲು ತುಳುನಾಡ ರಕ್ಷಣಾ ವೇದಿಕೆ ತೀಮರ್ಾನಿಸಿದೆ.
1956 ರಲ್ಲಿ `ಾಷಾವಾರು ಪ್ರಾಂತ್ಯ ರಚನೆಯಾಗುವ ಮೂಲಕ ನಾವು ನೆಲ-ಜಲ-ಭಾಷೆಯ ಹೆಸರಲ್ಲಿ ವಂಚಿಸಲ್ಪಟ್ಟು ಇಂದಿಗೂ ತೃತೀಯ ದಜರ್ೆಯ ಪ್ರಜೆಗಳಂತೆ ದುರಂತಗಳನ್ನು ಅನು`ವಿಸುತ್ತಿದ್ದೇವೆ. ಜಗತ್ತಿನಲ್ಲಿಯೇ ವಿಶಿಷ್ಟವಾದ ತುಳು ಸಂಸ್ಕೃತಿಯ ರಕ್ಷಣೆಗಾಗಿ ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಸೇರಿಸಬೇಕು, ಮಹಾಜನ ವರದಿ ಜಾರಿಯಾಗಬೇಕು, ಎಲ್ಲಾ ಶಾಲೆಗಳಲ್ಲಿ ತುಳು ಲಿಪಿಯನ್ನು ಕಲಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನ.1 ರಂದು ಕರಾಳ ದಿನ ಆಚರಿಸಲು ತೀಮರ್ಾನಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಅಂಚೆ ಕಚೇರಿಯ ಮುಂ`ಾಗದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ.
ಅದೇ ದಿನ ದ.ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕರಾಳ ದಿನ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತುಳುನಾಡ ರಕ್ಷಣಾ ವೇದಿಕೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಭಾಸ್ಕರ ಕೆ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

