No title
0
December 01, 2017
ಕೃಷಿಯ ಗುಣಮಟ್ಟ ಹೆಚ್ಚಿಸಲು ಎನ್ಫೋಸರ್್ಮೆಂಟ್ ವಿಭಾಗಕ್ಕೆ ರೂಪು
ಕಾಸರಗೋಡು: ಕೃಷಿ ವಲಯದಲ್ಲಿ ಕಾನೂನು ಪ್ರಕಾರವಾಗಿ ಅನುಸರಿಸಬೇಕಾಗಿರುವ ನಿಯಂತ್ರಣಗಳನ್ನು ಕಠಿಣವಾಗಿ ಜಾರಿಗೊಳಿಸಲು ಮತ್ತು ಬೀಜ, ಗೊಬ್ಬರ, ಕೀಟನಾಶಕ ಇತ್ಯಾದಿಗಳ ಗುಣಮಟ್ಟ ಖಾತರಿಪಡಿಸಲು ರಾಜ್ಯ ಕೃಷಿ ಇಲಾಖೆ ಎನ್ಫೋಸರ್್ಮೆಂಟ್ ವಿಭಾಗಕ್ಕೆ ರೂಪು ನೀಡಲು ತೀಮರ್ಾನಿಸಿದೆ.
ಕೃಷಿ ಮತ್ತು ಕೃಷ್ಯುತ್ಪನ್ನಗಳ ಗುಣಮಟ್ಟಗಳು ಮತ್ತು ವಿವಿಧ ಪರೀಕ್ಷೆಗಳನ್ನು ಕೃಷಿ ವಿಭಾಗದ ಅಧಿಕಾರಿಗಳೇ ನಡೆಸುತ್ತಿದ್ದರು. ಆದರೆ ಸಟರ್ಿಫಿಕೇಶನ್, ರಿಜಿಸ್ಟ್ರೇಶನ್, ಗುಣಮಟ್ಟಗಳನ್ನು ಖಾತರಿಪಡಿಸುವಿಕೆ ಇತ್ಯಾದಿಗಳ ಅರಿವು ಎನ್ಫೋಸರ್್ಮೆಂಟ್ ವಿಭಾಗಕ್ಕೆ ರೂಪು ನೀಡಲು ಕೃಷಿ ಇಲಾಖೆ ಮುಂದಾಗಲು ಕಾರಣವಾಗಿದೆ. ಇನ್ನು ಈ ಕೆಲಸವನ್ನು ಎನ್ಫೋಸರ್್ಮೆಂಟ್ ನಿರ್ವಹಿಸಲಿದೆ.
ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲೂ ಎನ್ಫೋಸರ್್ಮೆಂಟ್ಗೆ ರೂಪು ನೀಡಲಾಗುವುದು. ಬೀಜಗಳು, ಗೊಬ್ಬರ ಮತ್ತು ಕೀಟ ನಾಶಕಗಳ ಗುಣಮಟ್ಟ ನಿರ್ಣಯ ಮಾತ್ರವಲ್ಲ ಕೇರಳಕ್ಕೆ ಹೊರಗಡೆಯಿಂದ ಆಮದುಗೊಳಿಸುವ ಎಲ್ಲಾ ಕೃಷ್ಯುತ್ಪನ್ನಗಳು, ಬೀಜಗಳು, ಗೊಬ್ಬರ ಮತ್ತು ಕೀಟನಾಶಕಗಳನ್ನು ಎನ್ಫೋಸರ್್ಮೆಂಟ್ ವಿಭಾಗ ಪರಿಶೀಲಿಸಲಿದೆ.