HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಗಡಿನಾಡು ಕೊಂಕಣಿ ಸಂಭ್ರಮ ನಾಳೆ ಕುಂಬಳೆಯಲ್ಲಿ
  ಕುಂಬಳೆ: ಕನರ್ಾಟಕ ಕೊಂಕಣಿ ಸಾಹಿತ್ಯ ಅಕಡೆಮಿಯ ಕೊಂಕಣಿ ಮಾನ್ಯತಾ ದಿನಾಚರಣೆ ಸರಣಿ ಕಾರ್ಯಕ್ರಮದ ಅಂಗವಾಗಿ "ಗಡಿನಾಡು ಕೊಂಕಣಿ ಸಂಭ್ರಮ್" ನಾಳೆ (ಭಾನುವಾರ) ಬೆಳಿಗ್ಗೆ 10.30 ರಿಂದ ಕುಂಬಳೆಯ ಸಂತ ಮೋನಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
   ಕನರ್ಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ.ನಾಯ್ಕ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಕನರ್ಾಟಕ ವಿಧಾನ ಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜಾ ಉದ್ಘಾಟಿಸುವರು. ಮಂಗಳೂರಿನ ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಕುಂಬಳೆ ಸಂತ ಮೋನಿಕಾ ದೇವಾಲಯದ ಫಾ.ಮಾಸರ್ೆಲ್ ಸಲ್ದಾನಾ, ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದ ಅಧ್ಯಕ್ಷ ಡಾ.ಅನಂತ ಕಾಮತ್, ಮಂಜೇಶ್ವರ ಭೂಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಜೆ.ಎಸ್, ಕನರ್ಾಟಕ ವಕ್ಪ್ ಪರಿಷತ್ತು ಸದಸ್ಯ ಎಸ್.ಶಂಸುದ್ದೀನ್, ಸಮಾಜ ಸೇವಕ ಮೋಹನಕುಮಾರ್ ಕುಂಬ್ಳೆಕಾರ್, ನಾಯ್ಕಾಪು ಸಾಯಿಮಂದಿರದ ಅಧ್ಯಕ್ಷ ಅಂಪಾ ನಾಯಕ್, ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್, ಕುಂಬಳೆ ವೀರವಿಠಲ ದೇವಸ್ಥಾನದ ಮೊಕ್ತೇಸರ ನಾರಾಯಣ ಪ್ರಭು, ಕುಂಬಳೆ ಸಂತ ಮೋನಿಕಾ ದೇವಾಲಯದ ಉಪಾಧ್ಯಕ್ಷ ಥೋಮಸ್ ಕ್ರಾಸ್ತಾ, ರಾಷ್ಟ್ರೀಯ ಕಬ್ಬಡಿ ಕ್ರೀಡಾಪಟು ಸುಜೀರ್ ಮುಕುಂದರಾಜ್ ನಾಯಕ್, ರಂಗಕಮರ್ಿ ಫೆಲಿಕ್ಸ್ ಕ್ರಾಸ್ತಾ, ಕೇರಳ ತುಳು ಅಕಾಡೆಮಿ ಸದಸ್ಯ ರಾಜು ಸ್ಟೀಫನ್ ಡಿಸೋಜಾ, ಕುಂಬಳೆ ಗ್ರಾ.ಪಂ. ಸದಸ್ಯರುಗಳಾದ ಸುಧಾಕರ ಕಾಮತ್, ರಮೇಶ್ ಭಟ್, ಪುಷ್ಪಲತಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುವರು. ಅಕಾಡೆಮಿಯ ಸದಸ್ಯ ಸಂಚಾಲಕ ಲಕ್ಷ್ಮಣ ಪ್ರಭು ಕುಂಬಳೆ ಸಮಾರಂಭ ನಿರ್ವಹಿಸುವರು.
  ಉದ್ಘಾಟನಾ ಸಮಾರಂಭದ ಬಳಿಕ ಮಕ್ಕಳ ಕವಿತಾ ವಾಚನ-ಕವಿಗೋಷ್ಠಿ, ಸಮೂಹ ಗಾಯನ, ಕೊಂಕಣಿ ಜನಪದ ಗೀತೆಗಳ ಗಾಯನ, ಏಕವ್ಯಕ್ತಿ ನೃತ್ಯ, ಕೊಂಕಣಿ ಹರಿಕಥಾ ಸಂಕೀರ್ತನೆ, ಸಮೂಹ ನೃತ್ಯಗಳು, ಸಾಂಪ್ರದಾಯಿಕ ತಿಂಡಿಗಳ ಪ್ರದರ್ಶನ, ಕೊಂಕಣಿ ನೀತಿಕತೆಗಳು, ಕೊಂಕಣಿ ರೂಪಕ ಮೊದಲಾದ ವೈವಿದ್ಯಮಯ ಕಾರ್ಯಕ್ರಮಗಳು ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries