HEALTH TIPS

ಯಾವುದೇ ಶೀರ್ಷಿಕೆಯಿಲ್ಲ

     ಕ್ರಿಕೆಟ್ ಆಟದ ಮಧ್ಯೆ ಕುಸಿದು ಬಿದ್ದ ಯುವಕ ಮೃತ್ಯು
   ಮಂಜೇಶ್ವರ:  ಕ್ರಿಕೆಟ್ ಆಟದ ಮಧ್ಯೆ ಯುವಕನೊಬ್ಬ ಕುಸಿದು ಬಿದ್ದು  ಮೃತ ಪಟ್ಟಿದ್ದಾನೆ.
      ಪೈವಳಿಕೆ ಸಮೀಪದ ಜೋಡುಕಲ್ಲು ನಿವಾಸಿ ಪದ್ಮನಾಭ (25)  ಮೃತ ದುದರ್ೈವಿ. ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
        ಮೀಯಪದವು ಮೈದಾನದಲ್ಲಿ ಕ್ರಿಕೆಟ್ ಆಟ ನಡೆಯುತ್ತಿರುವ ಮಧ್ಯೆ ಬೌಲಿಂಗ್ ನಡೆಸುತ್ತಿದ್ದ  ಪದ್ಮನಾಭ ಕುಸಿದು ಬಿದ್ದರು. ಒಂದು ಓವರಿನಲ್ಲಿ ಒಂದು ಬಾಲ್ ಬಾಕಿ ಇರುವ ಮಧ್ಯೆ ಈ ದುರ್ಘಟನೆ ಸಂಭವಿಸಿದೆ.  ಕೂಡಲೇ ಪದ್ಮನಾಭರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿರುವ ಮಧ್ಯೆ ಸಾವು ಸಂಭವಿಸಿದೆ. ಪದ್ಮನಾಭರ ನಿಧನಕ್ಕೆ ಶೋಕ ವ್ಯಕ್ತ ಪಡಿಸಿ ಮಂಜೇಶ್ವರ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಗಳನ್ನು ದಿನದ ಮಟ್ಟಿಗೆ ನಿಲ್ಲಿಸಿರುವುದಾಗಿ ಕ್ರಿಕೆಟ್ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries