HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಎಣ್ಮಕಜೆ-ಹಸಿರು ಕೇರಳ ಯೋಜನೆ ವಾಷರ್ಿಕೋತ್ಸವ
  ಪೆರ್ಲ:  ಎಣ್ಮಕಜೆ ಗ್ರಾಮ ಪಂಚಾಯತಿನ ಆಶ್ರಯದಲ್ಲಿ ನವಕೇರಳ ಮಿಶನ್ ನ  ಭಾಗವಾಗಿ "ಹಸಿರು ಕೇರಳ' ಯೋಜನೆಯ ವಾಷರ್ಿಕೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಜರಗಿತು.
   ಗ್ರಾಮ ಪಂಚಾಯತಿ ಅಧ್ಯಕ್ಷೆ  ರೂಪವಾಣಿ ಆರ್. ಭಟ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಒಂದು ವರ್ಷಗಳ ಕಾಲ ಪಂಚಾಯತಿ ವ್ಯಾಪ್ತಿಯಲ್ಲಿ   ನಡೆಸಿದ ಶುಚಿತ್ಚ, ಮಾಲಿನ್ಯ ಸಂಸ್ಕರಣೆ ,ಜಲ ಸುರಕ್ಷೆ ,ಪರಿಸರ  ಸಂರಕ್ಷಣೆ  ಚಟುವಟಿಕೆಗಳ ಮಾಹಿತಿ ನೀಡಿದರು.
  ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ ಎ.ಕೆ. ಎಮ್ ಆಶ್ರಫ್   ಕಾರ್ಯಕ್ರಮವನ್ನು  ಉದ್ಘಾಟಿಸಿ  ಬ್ಲಾಕ್ ಪಂಚಾಯತಿ ಮುಖಾಂತರ ನಡೆಸಲ್ಪಡುವ ಹಸಿರು ಕೇರಳ  ಯೋಜನೆಗಳ ಮಾಹಿತಿಯನ್ನು ನೀಡಿದರು.ಜಿಲ್ಲಾ ಪಂಚಾಯತು   ಸದಸ್ಯೆ   ಪುಷ್ಪಾ ಅಮೆಕ್ಕಳ,ಬ್ಲಾಕ್ ಪಂಚಾಯತಿ ಸದಸ್ಯೆ ಸವಿತಾ ಬಾಳಿಕೆ ಶುಭ ಹಾರೈಸಿದರು.
   ಎಣ್ಮಕಜೆ  ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ , ಜಯಶ್ರೀ ಕುಲಾಲ್, ಸದಸ್ಯರಾದ  ಮಮತಾ ರೈ, ಪ್ರೇಮ,ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು.
   ಗ್ರಾಮ ಪಂಚಾಯತಿ ಆಧೀನದಲ್ಲಿರುವ ವಿವಿಧ  ಇಲಾಖೆಗಳ ಉದ್ಯೋಗಸ್ಥರು ಇಲಾಖೆಯ ಮುಖಾಂತರ ನಡೆದ ಹಸಿರು ಕೇರಳ  ಚಟುವಟಿಕೆಗಳ ವರದಿ ಮಂಡಿಸಿದರು.ಗ್ರಾಮ ಪಂಚಾಯತಿ ಉಪ ಕಾರ್ಯದಶರ್ಿ ಆಶ್ರಫ್  ಸ್ವಾಗತಿಸಿ , ಉದ್ಯೋಗ ಖಾತರಿ ಸಹಾಯಕ ಅಭಿಯಂತರ ಎ.ಇ ನವಾಜ್ ವಂದಿಸಿದರು. ಆಶಾ ಕಾರ್ಯಕತರ್ೆಯರು, ಅಂಗನವಾಡಿ  ಕಾರ್ಯಕತರ್ೆಯರು , ಕುಟುಂಬಶ್ರೀ ಹಾಗೂ ಪೆರ್ಲ ಶಾಲಾ ವಿದ್ಯಾಥರ್ಿಗಳ ಸಹಿತ 200 ಮಿಕ್ಕಿದ  ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries