HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಉಪ್ಪಳ ಅಧಿಕದಲ್ಲಿ ಕಡಲ್ಕೊರೆತ: ಮನೆ ನೀರು ಪಾಲು ಉಪ್ಪಳ: ಮೂಸೋಡಿ ಅದಿಕದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ನಾಲ್ಕು ಮನೆಗಳು ಪೂರ್ಣವಾಗಿ ಸಮುದ್ರಪಾಲಾಗಿದೆ. ಶುಕ್ರವಾರ ಸಂಜೆಯಿಂದ ತೀವ್ರಗೊಂಡ ಕಡಲ್ಕೊರೆತ ರಾತ್ರಿ 10 ಗಂಟೆ ವೇಳೆ ಮತ್ತಷ್ಟು ತೀವ್ರಗೊಂಡಿದೆ. ಈ ವೇಳೆ ಅಬ್ದುಲ್ ಖಾದರ್ ಎಂಬವರ ಮನೆ ಪೂರ್ಣವಾಗಿ ಸಮುದ್ರ ಪಾಲಾಯಿತು. ಈ ವೇಳೆ ಮನೆಯಿಂದ ಹೊರಗೋಡಿದ ಕುಟುಂಬ ಅಪಾಯದಿಂದ ಪಾರಾಗಿದೆ. ಕೂಡಲೇ ತಲುಪಿದ ಪೊಲೀಸ್, ಅಗ್ನಿಶಾಮಕದಳ, ಹಾಗೂ ಕಂದಾಯ ಅಧಿಕಾರಿಗಳು ಅಬ್ದುಲ್ ಖಾದರ್ರ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿದರು. ಇದೇ ವೇಳೆ ಈ ಹಿಂದೆ ಉಂಟಾದ ಕಡಲ್ಕೊರೆತಕ್ಕೆ ಸಿಲುಕಿ ಭಾಗಶಃ ನಾಶಗೊಂಡಿದ್ದ ಮೂರು ಮನೆಗಳೂ ಶುಕ್ರವಾರ ಪೂರ್ಣವಾಗಿ ನಾಶಗೊಂಡು ಸಮುದ್ರ ಪಾಲಾಯಿತು. ಖದೀಜಮ್ಮ, ಇಬ್ರಾಹಿಂ, ಅಶ್ರಫ್ ಎಂಬವರ ಮನೆಗಳು ನಾಶಗೊಂಡಿದೆ. ಈ ಹಿಂದೆ ಮನೆಗಳು ಭಾಗಶಃ ನಾಶಗೊಂಡಾಗ ಈ ಮೂರು ಕುಟುಂಬಗಳನ್ನು ಅಂದೇ ಸ್ಥಳಾಂತರಿ ಲಾಗಿತ್ತು. ಕಡಲ್ಕೊರೆತ ಮುಂದುವರಿಯುತ್ತಿದ್ದು ಸುಮಾರು 200 ಮೀಟರ್ ಪ್ರದೇಶ ಸಮುದ್ರ ಪಾಲಾಗಿದೆ. ಓಖ್ಖಿ ಭೀತಿ: ಕೇರಳದ ಸಮುದ್ರ ಕರಾವಳಿ ಸಹಿತ ವಿವಿಧೆಡೆ ಗುರುವಾರದಿಂದ ಪ್ರಕ್ಷುಬ್ದಗೊಂಡು ವ್ಯಾಪಕ ಹಾನಿಗೆ ಕಾರಣವಾಗಿರುವ ಓಖ್ಖಿ ಚಂಡಮಾರುತದ ಪ್ರಭಾವ ಕುಂಬಳೆ, ಮೊಗ್ರಾಲ್, ಉಪ್ಪಳ ಕಡಲ ಕಿನಾರೆಯಲ್ಲೂ ಪ್ರಭಾವ ಬೀರಿದೆ. ಉಪ್ಪಳದಲ್ಲಿ ಜನರು ಸಂಜೆವೇಳೆ ಮನೆಯಿಂದ ಹೊರಬಂದು ಮಧ್ಯರಾತ್ರಿಯ ತನಕ ಹೊರಗುಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries