HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಗೋಸಾಡದಲ್ಲಿ ಭೂತಬಲಿ ಉತ್ಸವ ಸಂಪನ್ನ
   ಬದಿಯಡ್ಕ : ಕುಂಬ್ಡಾಜೆ ಗ್ರಾಮದ ಗೋಸಾಡ ಮಹಿಷಮಧರ್ಿನೀ ಅಮ್ಮನವರ ಶ್ರೀ ಭೂತಬಲಿ ಉತ್ಸವವು ಸೋಮವಾರ ದರ್ಶನಬಲಿ, ಬಟ್ಲುಕಾಣಿಕೆ, ರಾಜಾಂಗಣ ಪ್ರಸಾದದೊಂದಿಗೆ ಸಮಾಪ್ತಿಯಾಯಿತು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ವಕರ್ಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಪ್ರಥಮ ದಿನ ಬೆಳಗ್ಗೆ ಗಣಪತಿ ಹೋಮ, ಪಾವೂರು ದೈವಸ್ಥಾನದಿಂದ ಶ್ರೀ ಧೂಮಾವತಿ ದೈವದ ಭಂಡಾರದ ಆಗಮನ, ಮಧ್ಯಾಹ್ನ ಯಕ್ಷಗಾನ ವೈಭವ ಜರಗಿತು. ಗಾನಗಂಧರ್ವ ದಿನೇಶ್ ಅಮ್ಮಣ್ಣಾಯ, ಸತ್ಯನಾರಾಯಣ ಪುಣಿಚಿತ್ತಾಯ, ಚೆಂಡೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ ಹಾಗೂ ಸತೀಶ್ ಪುಣಿಚಿತ್ತಾಯ ನಿರೂಪಣೆಯಲ್ಲಿ ಸಹಕರಿಸಿದರು. ಶ್ರೀ ದೇವರಿಗೆ ನವಕಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ಅನ್ನದಾನ ನಡೆಯಿತು. ಸಾಯಂಕಾಲ ದೀಪಾರಾಧನೆ, ತಾಯಂಬಕ, ಭಜನೆ, ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ. ರಾತ್ರಿ ಶ್ರೀ ಭೂತಬಲಿ ಉತ್ಸವ ನಡೆಯಿತು.
ಸೋಮವಾರ ಬೆಳಗ್ಗೆ ಶ್ರೀ ಭೂತಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ನವಕಾಭಿಷೇಕ, ಮಂತ್ರಾಕ್ಷತೆ ಜರಗಿತು.ಬಳಿಕ ಶ್ರೀ ಧೂಮಾವತಿ ದೈವದ ತಂಬಿಲ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಲ್ಲಮೂಲೆ ತರವಾಡು ಮನೆಯಿಂದ ಶ್ರೀ ಮಹಾವಿಷ್ಣುಮೂತರ್ಿ ದೈವದ ಭಂಡಾರ ಆಗಮಿಸಿ, ಕಾತರ್ಿಕ ಪೂಜೆ, ದೈವಗಳ ತೊಡಂಗಲ್. ಮಂಗಳವಾರ ರಕ್ತೇಶ್ವರೀ ದೈವದ ಕೋಲ, ಮಧ್ಯಾಹ್ನ ಶ್ರೀ ಮಹಾವಿಷ್ಣುಮೂತರ್ಿ ದೈವದ ಕೋಲ, ಅರಸಿನ ಹುಡಿ ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಸಮಾಪ್ತಿಗೊಂಡಿತು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries