HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ರಂಗಸಿರಿ ಸಭೆ
    ಬದಿಯಡ್ಕ: ಬದಿಯಡ್ಕದ ಸಾಂಸ್ಕೃತಿಕ ಸಂಘಟನೆ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಸಭೆಯು ಇತ್ತೀಚೆಗೆ ಬದಿಯಡ್ಕದಲ್ಲಿ ನಡೆಯಿತು.  ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ "ರಂಗಸಿರಿ ಸಂಭ್ರಮ 2018" ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀಮರ್ಾನಿಸಲಾಯಿತು. ಕಾರ್ಯಕ್ರಮವನ್ನು 2018 ಜನವರಿ 13ರಂದು ಕಿಳಿಂಗಾರು ಸಾಯಿಮಂದಿರದಲ್ಲಿ ನಡೆಸಲಿದ್ದು, ಸಮಾಜಕ್ಕೆ ಕೊಡುಗೆಯಿತ್ತ ಸಾಧಕರಿಗೆ ಸನ್ಮಾನ, ಭಕ್ತಿ ಭಾವ ಸಮ್ಮಿಳಿತ ಸಂಗೀತ, ಯಕ್ಷಗಾನ ಮೊದಲಾದ ಮೌಲ್ಯಯುತ ಕಾರ್ಯಕ್ರಮಗಳು ಜರಗಲಿವೆ. ಸಂಸ್ಥೆಯ ವಿದ್ಯಾಥರ್ಿಗಳ ಪ್ರತಿಭಾ ದರ್ಶನ ನಡೆಯಲಿದೆ. ಇನ್ನೂ ಹಲವು ವೈಶಿಷ್ಟ್ಯಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಲು ತೀಮರ್ಾನಿಸಲಾಯಿತು.
  ಸಭೆಯಲ್ಲಿ ಸೀತಾರಾಮ ಕುಂಜತ್ತಾಯ, ಕರಿಂಬಿಲ ಲಕ್ಷ್ಮಣಪ್ರಭು, ಪ್ರಭಾವತಿ ಕೆದಿಲಾಯ ಪುಂಡೂರು, ಶ್ರೀಶ ಕುಮಾರ ಪಂಜಿತ್ತಡ್ಕ, ನಾರಾಯಣ ಭಟ್, ರವಿರಾಜ,  ರೇಷ್ಮ, ಚಂದ್ರಿಕಾ, ಪುಷ್ಪಲತಾ, ದಿನೇಶ ಬೊಳುಂಬು, ಪ್ರಸಾದ್ ಮೈರ್ಕಳ, ಗಾನಲತಾ, ಭವ್ಯ, ಮನೀಶ್ ಮೊದಲಾದವರು ಉಪಸ್ಥಿತರಿದ್ದು, ಸಲಹೆಗಳನ್ನಿತ್ತು "ರಂಗಸಿರಿ ಸಂಭ್ರಮ 2018"ರ ರೂಪುರೇಷೆಗೆ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries