HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಇಂದು ಎಡನೀರು ಸ್ವಾಮೀಜಿ ಅವರಿಂದ
                ಭಕ್ತಿ-ಭಾವಗೀತೆಗಳ ಗಾಯನ `ಕೃಷ್ಣ ಹರೇ'
   ಕಾಸರಗೋಡು: ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರಿಂದ ಭಕ್ತಿ-ಭಾವಗೀತೆಗಳ ಗಾಯನ `ಕೃಷ್ಣ ಹರೇ' ಕಾರ್ಯಕ್ರಮ ಇಂದು ಸಂಜೆ 5.30 ಕ್ಕೆ ಪಿಲಿಕುಂಜೆಯ ಮುನ್ಸಿಪಲ್ ಕೌನ್ಸಿಲ್ ಹಾಲ್ನ `ಕಳ್ಳಿಗೆ ಮಹಾಬಲ ಭಂಡಾರಿ ವೇದಿಕೆ'ಯಲ್ಲಿ ನಡೆಯಲಿದೆ.
   ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡುವರು. ಬಾರ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಎ.ಎನ್.ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸುವರು. ಧಾಮರ್ಿಕ ಮುಖಂಡ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಅತಿಥಿಗಳಾಗಿ ಉದ್ಯಮಿ ರಾಮ್ಪ್ರಸಾದ್, ಪುರಸಭೆ ಸದಸ್ಯ ಸುಜಿತ್ ಉಪಸ್ಥಿತರಿರುವರು. 
  ಶ್ರೀಮದ್ ಎಡನೀರು ಶ್ರೀಗಳು ಪ್ರಸ್ತುತಪಡಿಸುವ  ಭಕ್ತಿ-ಭಾವಗೀತೆಗಳ ಗಾಯನ `ಕೃಷ್ಣ ಹರೇ' ಕಾರ್ಯಕ್ರಮದಲ್ಲಿ ಹಿನ್ನೆಲೆಯಲ್ಲಿ ಲೋಕೇಶ್ ಮೂಡಬಿದ್ರೆ, ಅಭಿಜಿತ್ ಶೆಣೈ, ರಾಜೇಶ್ ಮಂಗಳೂರು, ಪುರುಷೋತ್ತಮ್ ಕೊಪ್ಪಲ್, ದೇವರಾಜ್ ಆಚಾರ್ ಸಹಕರಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries