HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಆಲಂಗೋಡ್ಲು ಕ್ಷೇತ್ರೆಕ್ಕೆ ಬಾಳೆಕುದ್ರು ಶ್ರೀ ಭೇಟಿ   
  ಬದಿಯಡ್ಕ : ಕ್ಷೇತ್ರದ ಜೀಣರ್ೋದ್ಧಾರದಿಂದ ಗ್ರಾಮದ ಜನತೆಯಲ್ಲಿ ಬದಲಾವಣೆಯನ್ನು ಕಾಣಬಹುದು. ಒಗ್ಗಟ್ಟಿನಿಂದ ಕೈಗೊಂಡ ಕಾರ್ಯವು ಭಗವದನುಗ್ರಹಕ್ಕೆ ಪ್ರಾಪ್ತವಾಗುತ್ತದೆ ಎಂದು ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಭಕ್ತರನ್ನುದ್ದೇಶಿಸಿ ನುಡಿದರು.
ಅವರು ಶುಕ್ರವಾರ ಜೀಣರ್ೋದ್ಧಾರಗೊಳ್ಳುತ್ತಿರುವ ನೆಕ್ರಾಜೆ ಗ್ರಾಮದ ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿಯಿತ್ತು ಭಕ್ತಾದಿಗಳನ್ನುದ್ದೇಶಿಸಿ ಮಾತನಾಡುಡಿದರು.
  ಎಲ್ಲರ ಒಗ್ಗಟ್ಟಿನ ಪರಿಶ್ರಮದಿಂದ ಜೀಣರ್ೋದ್ಧಾರ ಕಾರ್ಯವು ಬೇಗನೆ ಕೈಗೂಡಲಿ ಎಂದರು. ಕ್ಷೇತ್ರದ ಆಡಳಿತ ಸಮಿತಿಯ ವತಿಯಿಂದ ವೇದಫೋಷ ಹಾಗೂ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸೇವಾಸಮಿತಿಯ ಅಧ್ಯಕ್ಷ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ದಂಪತಿಗಳು ಶ್ರೀಗಳಿಗೆ ಫಲಪುಷ್ಪಗಳನ್ನು ನೀಡಿ ಆಶೀವರ್ಾದವನ್ನು ಪಡೆದುಕೊಂಡರು. ಸೇವಾ ಸಮಿತಿಯ ಸದಸ್ಯ ಬಾಲಸುಬ್ರಹ್ಮಣ್ಯ ವಾಲ್ತಾಜೆ ಹಾರಾರ್ಪಣೆಗೈದರು. ಪ್ರವೀಣ್ ಪುಣಿಂಚಿತ್ತಾಯ, ರವಿಶಂಕರ ಪುಣಿಂಚಿತ್ತಾಯ, ಲಕ್ಷ್ಮೀಶ ಬಳ್ಳುಳ್ಳಾಯ, ಮುರಳೀಧರನ್, ನಾರಾಯಣ, ಸೀತಾರತ್ನ, ಡಾ| ಗಣರಾಜ ಭಟ್, ಶಿವರಾಮ ಕಲ್ಕೂರ ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದು ಮಂತ್ರಾಕ್ಷತೆಯನ್ನು ಪಡೆದುಕೊಂಡರು. ಪುಂಡೂರು ಮನೆತನದ ಹಿರಿಯ ಸದಸ್ಯ ರಾಜಗೋಪಾಲ ಪುಣಿಂಚಿತ್ತಾಯ ಸ್ವಾಗತಿಸಿ, ಸೇವಾಸಮಿತಿಯ ಅಧ್ಯಕ್ಷ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಧನ್ಯವಾದವನ್ನಿತ್ತರು. ಸೀತಾರಾಮ ರಾವ್ ಪಿಲಿಕೂಡ್ಲು ನಿರೂಪಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries