ನಾರಾಯಣ ಮಾಟೆಯವರಿಗೆ ಆಲಪ್ಪುಯದಲ್ಲಿ ಸನ್ಮಾನ
ಮುಳ್ಳೇರಿಯ: ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಯಕ್ಷಗಾನ ಭಾಗವತ ಮಾಟೆ ನಾರಾಯಣ ಅವರನ್ನು ಆಲಪ್ಪುಯ ಜಿಲ್ಲೆಯ ಅಂಬಲಪ್ಪುಯ ಕಕ್ಕಾಯಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಆಲಪ್ಪುಯ ಜಿಲ್ಲೆಯ ಹಿರಿಯ ಕಥಾ ಸಂಕೀರ್ತನ ಕಲಾವಿದ ತಣ್ಣೀರ್ ಮುಕ್ಕಂ ಸದಾಶಿವನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಅಧಿಕೃತರು, ಅಧ್ಯಾಪಕರು ಮತ್ತು ಊರ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಟೆಯವರು ಯಕ್ಷಗಾನ ಕಲಾ ಸೇವಕನಾದ ನನ್ನನ್ನು ಗೌರವಿಸಿದುದು ಕಲೆಯನ್ನು ಗೌರವಿಸಿದಂತೆ ಎಂದು ಹೇಳಿದರು.
ಶಿಕ್ಷಕ ರತೀಶ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಸುಮನಾ ವಂದಿಸಿದರು.
ಮುಳ್ಳೇರಿಯ: ಕೇರಳ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಯಕ್ಷಗಾನ ಭಾಗವತ ಮಾಟೆ ನಾರಾಯಣ ಅವರನ್ನು ಆಲಪ್ಪುಯ ಜಿಲ್ಲೆಯ ಅಂಬಲಪ್ಪುಯ ಕಕ್ಕಾಯಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಆಲಪ್ಪುಯ ಜಿಲ್ಲೆಯ ಹಿರಿಯ ಕಥಾ ಸಂಕೀರ್ತನ ಕಲಾವಿದ ತಣ್ಣೀರ್ ಮುಕ್ಕಂ ಸದಾಶಿವನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಅಧಿಕೃತರು, ಅಧ್ಯಾಪಕರು ಮತ್ತು ಊರ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾಟೆಯವರು ಯಕ್ಷಗಾನ ಕಲಾ ಸೇವಕನಾದ ನನ್ನನ್ನು ಗೌರವಿಸಿದುದು ಕಲೆಯನ್ನು ಗೌರವಿಸಿದಂತೆ ಎಂದು ಹೇಳಿದರು.
ಶಿಕ್ಷಕ ರತೀಶ್ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಸುಮನಾ ವಂದಿಸಿದರು.


