HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸವಾಕ್ ನೇತೃತ್ವದಲ್ಲಿ ಶನಿವಾರ ಮೇಳೈಸಲಿದೆ ಕಲಾವಿದರ ಸಾಂಸ್ಕೃತಿಕ ಕುಟುಂಬ ಸಂಗಮ

     ಕುಂಬಳೆ: ಸ್ಟೇಜ್ ಆಟರ್ಿಸ್ಟ್ ್ಸ  ಆ್ಯಂಡ್ ವರ್ಕರ್ಸ್ ಅಸೋಸಿಯೇಶನ್ (ಸವಾಕ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜ.20 ರಂದು ಕಾಸರಗೊಡಿನಲ್ಲಿ ಇದೇ ಮೊತ್ತಮೊದಲ ಬಾರಿಗೆ ಕಲಾವಿದರ ಸಾಂಸ್ಕೃತಿಕ ಕುಟುಂಬ ಸಂಗಮ ನಡೆಯುವುದು.
   ಮಧ್ಯಾಹ್ನ 2 ಗಂಟೆಗೆ ಕಲಾವಿದರ ವರ್ಣರಂಜಿತ ಮೆರವಣಿಗೆ ನಗರದಲ್ಲಿ ನಡೆಯಲಿದೆ. ಸಂಜೆ 4 ಗಂಟೆಗೆ ಸವಾಕ್ ರಾಜ್ಯ ಅಧ್ಯಕ್ಷ ಜಿ.ವಿಶಾಕನ್ ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ್ ಎಂ.ಸಾಲಿಯಾನ್ ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾಧಿಕಾರಿ ಜೀವನ್ ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾಸರಗೋಡು ನಗರಸ`ಭಾ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಮಾಜಿ ಶಾಸಕ ಸಿ.ಎಚ್.ಕುಂಞಂಬು, ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಕೇರಳ ಕಲ್ಚರಲ್ ವೆಲ್ಪೇರ್ ಬೋಡರ್್ ಸದಸ್ಯ ರವೀಂದ್ರನ್ ಕೊಡಕ್ಕಾಡ್ ಅತಿಥಿಗಳಾಗಿ ಉಪಸ್ಥಿತರಿರುವರು. 
    ಸವಾಕ್ ರಾಜ್ಯ ಕಾರ್ಯದಶರ್ಿ ಸುದರ್ಶನ್ ವರ್ಣ, ಉಪಾಧ್ಯಕ್ಷ ರಾಜೇಶ್ ಪಾಲಂಗಾಡ್, ಕೋಶಾಧಿಕಾರಿ ಆಲಿಯಾರ್ ಪುನ್ನಪ್ರ, ಕಾರ್ಯನಿವರ್ಾಹಕ ಕಾರ್ಯದಶರ್ಿ ವಿನೋದ್ ಅಚುಂಬಿತ, ಮಹಿಳಾ ಸಮಿತಿ ಅಧ್ಯಕ್ಷೆ ಬಿಂದು ಸಜಿತ್ ಕುಮಾರ್, ಕಣ್ಣೂರು ಜಿಲ್ಲಾ ಕಾರ್ಯದಶರ್ಿ ಹರಿದಾಸ್ ಚೆರುಕುನ್ನು, ಕೆಎಸ್ಎಚ್ಜಿಒಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸುರೇಂದ್ರನ್ ಶುಭಹಾರೈಸುವರು. ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾಂಞಂಗಾಡ್ ರಾಮಚಂದ್ರನ್ ಉದ್ಘಾಟಿಸುವರು. ಡಾ.ಶ್ರೀರಾಮ ಅಗ್ಗಿತ್ತಾಯ, ಉಸ್ತಾದ್ ಹಸನ್ಬಾಯಿ, ರೆ.ಫಾ.ಮಾನಿಮೆಲ್ ವೆಟ್ಟಂ ಅವರನ್ನು ಗೌರವಿಸಲಾಗುವುದು.
   ವಿಶಿಷ್ಟ ಸಂಘಟನೆ-ಕಾರ್ಯಕ್ರಮ:
   ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಕಲೆ, ಕಲಾವಿದರ ಬದುಕು ಬವಣೆಯ ಬಗ್ಗೆ ಪ್ರಸ್ತುತ ಭಾರೀ ಚಚರ್ೆಗಳಾಗುತ್ತಿವೆ. ತನ್ನ ಅಂತರಂಗದಲ್ಲಿ ಜಿನುಗುವ ನೋವನ್ನು ಅದುಮಿಟ್ಟು ರಂಗದಲ್ಲಿ ಭಾವ ಪ್ರಪಂಚವನ್ನು ತೆರೆದಿಡುವ ಕಲಾವಿದರ ನೈಜ ಬದುಕನ್ನು, ಅದರಾಚೆಗಿನ ನೋವನ್ನು ಪರಿಹರಿಸುವವರು ವಿರಳ.ಈ ನಿಟ್ಗಟಿನಲ್ಲಿ ದಶಕಗಳ ಹಿಂದೆ ರಾಷ್ಟ್ರದಲ್ಲೇ ಮೊತ್ತಮೊದಲ ಬಾರಿಗೆ ಕಲಾವಿದರಿಗಾಗಿಯೇ ಕಲಾವಿದರಿಂದ ಕಲಾವಿದರಿಗೋಸ್ಕರ ಸ್ಥಾಪಿಸಲ್ಪಟ್ಟ ಸಂಘಟನೆ ಸವಾಕ್, ಅಥವಾ ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಓಫ್ ಕೇರಳ. ರಾಜ್ಯಾದ್ಯಂತ ವ್ಯಾಪಕ ಕಾರ್ಯಚಟುವಟಿಕೆಗಳನ್ನು ಈ ಸಂಘಟನೆ ಪಡಿಮೂಡಿಸಿದ್ದರೂ ಗಡಿನಾಡು ಕಾಸರಗೋಡಿಗೆ ಇದು ಪರಿಚಯಿಸಲ್ಪಟ್ಟಿದ್ದು ಕಳೆದ ಮೂರು ತಿಂಗಳ ಹಿಂದೆ. ಬಳಿಕ ನಡೆದದ್ದು ಇತಿಹಾಸ. ಜಿಲ್ಲೆಯಾದ್ಯಂತ 6 ಬ್ಲಾಕ್ ಗಳಲ್ಲಿ ವಿಸ್ಕೃತವಾಗಿ ಕಲಾವಿದರನ್ನು ಒಗ್ಗೂಡಿಸಿ ಸಂಗಟನೆ ಬಲಗೊಳ್ಳುತ್ತಿದೆ.
   ಸವಾಕ್ ಕಲೆ, ಸಾಂಸ್ಕೃತಿಕ ಕ್ಷೇತ್ರದ ಎಲ್ಲಾ ವಿಭಾಗದವರನ್ನು ಒಗ್ಗೂಡಿಸಿ ಅವರಿಗೆ ಸರಕಾರದಿಂದ ಲಭಿಸುವ ನ್ಯಾಯಯುತ ಹಕ್ಕುಗಳನ್ನು ಪಡೆಯುವಲ್ಲಿ ಕಾರ್ಯವೆಸಗುತ್ತಿದೆ. ಅಶಕ್ತ ಕಲಾವಿದರ ಪಿಂಚಣಿ, ವಿಮೆ, ನೌಕರ ಕ್ಷೇಮ ಯೋಜನೆಗಳ ನೆರವುಗಳೇ ಮೊದಲಾದ ಸಹಾಯದ ಜೊತೆಗೆ ಪುನಶ್ಚೇತನ ಕಯರ್ಾಗಾರಗಳನ್ನೊಳಗೊಂಡ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕಲಾವಿದರಿಗೆ ರಾಜ್ಯ ಸರಕಾರದಿಂದ ಲಭ್ಯವಾಗುತ್ತಿದ್ದ ಮಾಸಾಶನ 1000 ರೂ.ಗಳನ್ನು 3 ಸಾವಿರ ರೂ.ಗಳಿಗೆ ಹೆಚ್ಚಿಸಿರುವ ಕೀತರ್ಿ ಸವಾಕ್ ನದ್ದು.
   ಗಡಿನಾಡಲ್ಲಿ:
   ಕನರ್ಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಸದಸ್ಯ, ರಂಗ ನಿದರ್ೇಶಕ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸವಾಕ್ ನ ಬಲಿಷ್ಠ ತಂಡ ಕಾರ್ಯವೆಸಗುತ್ತಿದೆ. ತಂಡದಲ್ಲಿ ಹಿರಿಯ ಯಕ್ಷಗಾನ ಕಲಾವಿದ,ಗುರು ದಿವಾಣ ಶಿವಶಂಕರ ಭಟ್, ಶೇಣಿ ಪರಂಪರೆಯ ವೇಣುಗೋಪಾಲ ಶೇಣಿ, ಕಾಸರಗೋಡಿನ ಹಿರಿಯ ಸಂಗೀತ ವಾದ್ಯೋಪಕರಣಗಳ ನಿದರ್ೇಶಕ ಉಮೇಶ್ ಮಾಸ್ಟರ್ ಫ್ಯೂಶನ್, ರಂಗ ಕಲಾವಿದ ಎಬಿ ಬಲ್ಲಾಳ್, ರಂಗ ಕಲಾವಿದ, ನಿದರ್ೇಶಕ ಸೋಮನಾಥ ಶೆಟ್ಟಿ ಮಂಗಲ್ಪಾಡಿ, ದಯಾ ಮಾಡ, ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸುರೇಶ್ ಪಣಿಕ್ಕರ್, ಜಗನ್ ಶೆಟ್ಟಿ ಮಂಗಲ್ಪಾಡಿ, ದಿವಾಕರ ಬಲ್ಲಾಳ್, ಕರಿವೆಳ್ಳೂರ್ ರಾಜನ್, ದಿವಾಕರ ಅಶೋಕನಗರ, ಕುಲ್ದೀಪ್ ಶಮರ್ಾ,ಶ್ರುತಿಬ ವಾರಿಜಾಕ್ಷನ್, ನೀತು ಶ್ರೀರಾಮ್ ಸಹಿತ ನೂರಾರು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries