HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಪೇರಾಲು ಶಾಲೆಯಲ್ಲಿ ವರ್ಧಂತ್ಯುತ್ಸವ
    ಕುಂಬಳೆ: ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲಾ ವರ್ಧಂತ್ಯುತ್ಸವ ಫೆ.25 ರಂದು ಆದಿತ್ಯವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
      ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಅಧ್ಯಕ್ಷತೆ ವಹಿಸುವರು. ಕಾಸರಗೋಡು ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್ ಮುಖ್ಯ ಅತಿಥಿಯಾಗಿರುವರು. ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿದರ್ೇಶಕರು, ಸರ್ವಶಿಕ್ಷಾ ಅಭಿಯಾನದ ಜಿಲ್ಲಾ ಯೋಜನಾಧಿಕಾರಿಗಳು, ಮಂಡಲ, ಪಂಚಾಯತು ಮಟ್ಟದ ಜನಪ್ರತಿನಿಧಿಗಳು, ಶಿಕ್ಷಣಾಧಿಕಾರಿಗಳು, ಸರ್ವಶಿಕ್ಷಾ ಅಭಿಯಾನದ ಉಪಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು ಶುಭಹಾರೈಸುವರು.
   ಈ ಸಂದರ್ಭದಲ್ಲಿ ಶಾಲೆಯ ಪುನರ್ ನಿಮರ್ಿತ ಕಟ್ಟಡವನ್ನು ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷರು ಉದ್ಘಾಟಿಸುವರು. ಸರ್ವಶಿಕ್ಷಾ ಅಭಿಯಾನದ ಅನುದಾನದಲ್ಲಿ ನಿಮರ್ಿಸಲಾದ ಶೌಚಾಲಯವನ್ನು ಜಿಲ್ಲಾ ಯೋಜನಾಧಿಕಾರಿ ವೇಣುಗೋಪಾಲನ್ ಉದ್ಘಾಟಿಸುವರು. ಶಾಲಾ ಹಿತೈಷಿಗಳು ನಿಮರ್ಿಸಿದ ಶಾಶ್ವತ ವೇದಿಕೆಯನ್ನು ಕುಂಬಳೆ ಗ್ರಾಮ ಪಂಚಾಯತು ಸದಸ್ಯ ವಿ.ಪಿ.ಅಬ್ದುಲ್ ಖಾದರ್ ಹಾಜಿ ಉದ್ಘಾಟಿಸಲಿರುವರು. ಅಂತಾರಾಷ್ಟ್ರೀಯ ಕಾರು ರ್ಯಾಲಿಯಲ್ಲಿ ಹಲವು ಬಾರಿ ಚಾಂಪ್ಯನ್ ಆಗಿ ಮೆರೆದ ಮೂಸಾ ಶರೀಫ್ ಪೆರುವಾಡು ಮತ್ತು ಸಂತೋಷ್ ಟ್ರೋಫಿ ಕೇರಳ ತಂಡದ ಪ್ರಬಂಧಕರಾಗಿ ನೇಮಕಗೊಂಡ ಪಿ.ಸಿ.ಆಸಿಫ್ ಮೊಗ್ರಾಲ್ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಗುವುದು.
   ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ನೇತೃತ್ವದಲ್ಲಿ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಗಳಿಸಿದ ಯಕ್ಷಗಾನ ತಂಡದ ಮಕ್ಕಳಿಂದ ಯಕ್ಷಗಾನ, ಅಂತಾರಾಷ್ಟ್ರೀಯ ಖ್ಯಾತಿಯ ಉದಯನ್ ಕುಂಡಂಕುಳಿ ಮತ್ತು ತಂಡದವರು ಪ್ರಸ್ತುತ ಪಡಿಸುವ ನಾಟ್ಟರಂಙ, ಊರ ಕಲಾವಿದರು ಪ್ರಸ್ತುತಪಡಿಸುವ ಕಾರ್ಯಕ್ರಮಗಳು ವರ್ಧಂತ್ಯುತ್ಸವಕ್ಕೆ ಮೆರಗು ನೀಡಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries