HEALTH TIPS

ಯಾವುದೇ ಶೀರ್ಷಿಕೆಯಿಲ್ಲ

        ಮಕ್ಕಳನ್ನು ಸವ್ಯಸಾಚಿಯಾಗಿಸುವ ಶೈಕ್ಷಣಿಕ ಯೋಜನೆ
   ಬದಿಯಡ್ಕ: ಮಕ್ಕಳು ಕೇವಲ ಪುಸ್ತಕದ ವಿಚಾರಗಳನ್ನು ತಿಳಿಯುವುದು ಮಾತ್ರವಲ್ಲ. ಇತರ ಸಹ ಪಠ್ಯ ಚಟುವಟಿಕೆಗಲಲ್ಲಿಯೂ ಭಾಗವಹಿಸಬೇಕು. ಮಕ್ಕಳು ಬದುಕನ್ನು ಎದುರಿಸುವ ವಿದ್ಯೆಯನ್ನು ಶಾಲೆಯಲ್ಲಿ ಕಲಿಸಬೇಕು. ಇದಕ್ಕಾಗಿ ಉತ್ತಮ ತಯಾರಿ ನಡೆಸಬೇಕು. ಮುಂದಿನ ವರ್ಷ ಮಕ್ಕಳಿಗೆ ಕಲಿಸುವ ವಿಚಾರಗಳ ಒಂದು ತಯಾರಿಯೇ ಈ ಶಾಲಾ ಶೈಕ್ಷಣಿಕ ಯೋಜನೆ . ಇದರಲ್ಲಿರುವಂತೆ ಮಕ್ಕಳನ್ನು  ಸವ್ಯ ಸಾಚಿಯಾಗಿಸೋಣ ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ರಾಜೇಶ್ವರಿ ಪಟ್ಟಾಜೆ ನುಡಿದರು.
   ಅವರು ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದಲ್ಲಿ ಅಧ್ಯಾಪಕರು,ಆಡಳಿತ ಮಂಡಳಿ, ರಕ್ಷಕರು ಮತ್ತು ಶಿಕ್ಷಣಾಸಕ್ತರು ಒಟ್ಟು ಸೇರಿ ತಯಾರಿಸಿದ ಶೈಕ್ಷಣಿಕ ಯೋಜನೆ(ಎಕಾಡೆಮಿಕ್ ಮಾಸ್ಟರ್ ಪ್ಲಾನ್) ನ್ನು ಬುಧವಾರ ಬಿಡುಗಡೆಗೊಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಅತಿಥಿಗಳಾಗಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಮಹಮ್ಮದ್ ಆಶ್ರಪ್, ಉಪಾಧ್ಯಕ್ಷ ಬಾಬು ನಾಯರ್, ಆಡಳಿತ ಮಂಡಳಿ ಸದಸ್ಯ ಕೃಷ್ಣ ಪ್ರಸಾದ್ ರೈ, ಹೆಚ್ಚುವರಿ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್, ಹಿರಿಯ ಅಧ್ಯಾಪಿಕೆ ಪಿ ಕೆ ತಂಗಮಣಿ, ನೌಕರ ಸಂಘದ ಕಾರ್ಯದಶರ್ಿ ಸುಶೀಲ, ಮಾಧವನ್ ಭಟ್ಟಾದ್ರಿ, ದೇವೀದಾಕ್ಷನ್  ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
    ಮುಖ್ಯೋಪಾಧ್ಯಾಯ ಶಂಕರ್ ಸಾರಡ್ಕ ಸ್ವಾಗತಿಸಿ,. ಪ್ರಭಾರ ಪ್ರಾಂಶುಪಾಲೆ ಶ್ರೀಜ ವಂದಿಸಿದರು. ನಾರಾಯಣ ಅಸ್ರ ಕಾರ್ಯಕ್ರಮ ನಿರೂಪಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries