HEALTH TIPS

No title

                   ಅಕ್ಷತಾಳ ಮನೆಗೆ ನಾಗಲಕ್ಷ್ಮೀಬಾಯಿ ಭೇಟಿ.
    ಮುಳ್ಳೇರಿಯ : ಸುಂದರ ಭವಿಷ್ಯದ ಹೊಂಗನಿಸಿನಲ್ಲಿದ್ದ ಪ್ರತಿಭಾನ್ವಿತ ವಿದ್ಯಾಥರ್ಿನಿ ಕು. ಅಕ್ಷತಾ ಫೆ.20 ರಂದು ಸುಳ್ಯ ಪೇಟೆಯ ನಡುರಸ್ತೆಯಲ್ಲಿ ಅಮಾನವೀಯವಾಗಿ ಹತ್ಯೆಯಾಗಿರುವುದು ಸ್ವಸ್ಥ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಘಟನೆಯ ವಿವರ ತಿಳಿದ ಕನರ್ಾಟಕದ ಮಹಿಳಾ ಆಯೋಗದ ಅಧ್ಯಕ್ಷೆ  ನಾಗಲಕ್ಷ್ಮೀ ಬಾಯಿಯವರು ಕು. ಅಕ್ಷತಾಳ ಹುಟ್ಟೂರಾದ ಮುಳ್ಳೇರಿಯಾ ಶಾಂತಿನಗರ ಸಮೀಪದ ಕರಣಿ ರಾಧಾಕೃಷ್ಣ ಭಟ್ ರವರ ಮನೆಗೆ ಸೋಮವಾರ ಭೇಟಿಯಿತ್ತು ಹೆತ್ತವರಿಗೆ ಸಾಂತ್ವನ ಹೇಳಿದರು.
  ಈ ಸಂದರ್ಭದಲ್ಲಿ ತನ್ನ ಮಗಳ ದಾರುಣ ಸಾವಿನ ಬಗ್ಗೆ ಪಾರದರ್ಶಕವಾದ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕನರ್ಾಟಕ ಮಹಿಳಾ ಆಯೋಗದ ಅಧ್ಯಕ್ಷೆಗೆ ಹೆತ್ತವರು ಮನವಿ ಸಲ್ಲಿಸಿದರು.
ಕು. ಅಕ್ಷತಾಳ ಕುಟುಂಬದವರ ಬಡತನ, ನೋವನ್ನು ಕಣ್ಣಾರೆ ಕಂಡ ಮಹಿಳಾ ಆಯೋಗದ ಅಧ್ಯಕ್ಷರ ಕಣ್ಣುಗಳು ತುಂಬಿದವು ಮತ್ತು ತಕ್ಷಣಕ್ಕೆ ಸ್ಪಂದಿಸಿದ ಅವರು ಆಥರ್ಿಕ ನೆರವಿನ ಭರವಸೆ ನೀಡಿದ್ದಲ್ಲದೇ  ಕುಟುಂಬ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ದೊರಕಿಸಿಕೊಡುವ ಭರವಸೆಯನ್ನಿತ್ತರು.
ಈ ಸಂದರ್ಭದಲ್ಲಿ ಇಬ್ರಾಹಿಂ ಗೋಳಿಕಟ್ಟೆ, ಶ್ಯಾಮ ಸುದರ್ಶನ, ಹವ್ಯಕ ಮಹಾಮಂಡಲದ ವಿದ್ಯಾ ಪ್ರಧಾನರಾದ ಯಸ್. ಜಿ. ಭಟ್ ಕಬ್ಬಿನಗದ್ದೆ, ಮುಳ್ಳೇರಿಯಾ ಮಂಡಲ ಉಪಾಧ್ಯಕ್ಷ ಕುಮಾರ್ ಯಸ್ ಪೈಸಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries