HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಇಂದು ಬಿ.ಎಂ.ಎಸ್. ಜಿಲ್ಲಾ ಸಮ್ಮೇಳನ ಆರಂಭ
  ಕುಂಬಳೆ: ಭಾರತೀಯ ಮಜ್ದೂರ್ ಸಂಘದ ಕಾಸರಗೋಡು ಜಿಲ್ಲಾ ಸಮ್ಮೇಳನ ಇಂದು ಮತ್ತು ನಾಳೆ ಕುಂಬಳೆಯಲ್ಲಿ ನಡೆಯಲಿದೆ. ಸಮ್ಮೇಳನದಂಗವಾಗಿ ಕಾಮರ್ಿಕರ ಮೆರವಣಿಗೆ, ಸಾರ್ವಜನಿಕ ಸಮಾವೇಶ, ಪ್ರತಿನಿಧಿ ಸಮಾವೇಶ ಮೊದಲಾದವುಗಳನ್ನು ಆಯೋಜಿಸಲಾಗದೆ.
   ಇಂದು ಬೆಳಗ್ಗೆ 10 ಕ್ಕೆ ಕುಂಬಳೆ ಬಳಿಯ ಪೆರುವಾಡ್ ಜಂಕ್ಷನ್ನಿಂದ ಕಾಮರ್ಿಕರ ಬೃಹತ್ ಮೆರವಣಿಗೆ ಹೊರಡಲಿದೆ. ಬಳಿಕ 10.30 ಕ್ಕೆ ಕುಂಬಳೆ ಬದಿಯಡ್ಕ ರಸ್ತೆಯಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಿದ ವೇದಿಕೆಯಲ್ಲಿ ಸಾರ್ವಜನಿಕ ಸಭೆ ನಡೆಯುವುದು. ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ.ಪಿ.ರಾಜೀವನ್ ಉದ್ಘಾಟಿಸುವರು. ಸ್ವಾಗತ ಸಮಿತಿ ರಕ್ಷಾಧಿಕಾರಿ ಕೆ.ದಿನೇಶ್ ಮಡಪ್ಪುರ ಅಧ್ಯಕ್ಷತೆ ವಹಿಸುವರು. ಬಿಎಂಎಸ್ ಕೇರಳ ರಾಜ್ಯ ಉಪಾಧ್ಯಕ್ಷ ಉಣ್ಣಿಕೃಷ್ಣನ್ ಉಣ್ಣಿತ್ತಾನ್ ಪ್ರಧಾನ ಭಾಷಣ ಮಾಡುವರು.
    ನಾಳೆ  ಬೆಳಗ್ಗೆ 9.30 ಕ್ಕೆ ನೋಂದಾವಣೆ, 9.45 ಕ್ಕೆ ಧ್ವಜಾರೋಹಣ ನಡೆಯಲಿದೆ. 11.30 ಕ್ಕೆ ಬಿಎಂಎಸ್ ಜಿಲ್ಲಾ ಕಾರ್ಯದಶರ್ಿ ಕೆ.ಎ.ಶ್ರೀನಿವಾಸನ್ ವರದಿ ಮತ್ತು ಜಿಲ್ಲಾ ಕೋಶಾಧಿಕಾರಿ ಎಂ.ಬಾಬು ಆಥರ್ಿಕ ವರದಿ ಮಂಡಿಸುವರು. 12.45 ಕ್ಕೆ ಠರಾವು ಮಂಡನೆ, ಅಪರಾಹ್ನ 2 ಕ್ಕೆ ಮುಂದಿನ ಕಾರ್ಯನಿರ್ವಹಣೆಯ ಕುರಿತಾಗಿ ರಾಜ್ಯ ಉಪಾಧ್ಯಕ್ಷರ ನೇತೃತ್ವದಲ್ಲಿ ಸಂಘಟನಾ ಚಚರ್ೆ, 2.45 ಕ್ಕೆ ನೂತನ ಪದಾಕಾರಿಗಳ ಆಯ್ಕೆ, 3 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
   ಬಿಎಂಎಸ್ ರಾಜ್ಯ ಸಂಘಟನಾ ಕಾರ್ಯದಶರ್ಿ ಸಿ.ವಿ.ರಾಜೇಶ್ ಸಮಾವೇಶವನ್ನು ಉದ್ಘಾಟಿಸುವರು. ಬಳಿಕ ಧ್ವಜಾವರೋಹಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
  ಪ್ರತಿನಿಧಿ ಸಮ್ಮೇಳನ : ಫೆ.25 ರಂದು ಬೆಳಗ್ಗೆ 10 ಕ್ಕೆ ಕುಂಬಳೆ ಶ್ರೀ ವೀರಾಂಜನೇಯ ಮಲ್ಲಿಕಾಜರ್ುನ ಸಭಾಮಂಟಪದಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಿದ ದಿ.ನ್ಯಾಯವಾದಿ ಪಿ.ಸುಹಾಸ್ ನಗರದಲ್ಲಿ ನಡೆಯುವ ಪ್ರತಿನಿಧಿ ಸಮ್ಮೇಳನವನ್ನು ಬಿಎಂಎಸ್ ಕೇರಳ ರಾಜ್ಯಾಧ್ಯಕ್ಷ ಕೆ.ಕೆ.ವಿಜಯ ಕುಮಾರ್ ಉದ್ಘಾಟಿಸುವರು. ಬಿಎಂಎಸ್ ಜಿಲ್ಲಾಧ್ಯಕ್ಷ ನ್ಯಾಯವಾದಿ ಪಿ.ಮುರಳೀಧರನ್ ಅಧ್ಯಕ್ಷತೆ ವಹಿಸುವರು. ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ.ಪಿ.ರಾಜೀವನ್, ಬಿಎಂಎಸ್ ರಾಜ್ಯ ಕಾರ್ಯದಶರ್ಿ ವಿ.ವಿ.ಬಾಲಕೃಷ್ಣನ್ ಶುಭಹಾರೈಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries