HEALTH TIPS

No title

               ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ- ನೂತನ ಸಭಾಭವನ " ಪಾಂಚಜನ್ಯ" ದ ಉದ್ಘಾಟನೆ
      ಪೆರ್ಲ: ಶ್ರೀವಾಣೀ ಯುವಕ ಮಂಡಲ ಮತ್ತು ಶ್ರೀ ಕೃಷ್ಣ ಭಜನಾ ಸಂಘ ಹಾಗೂ ಅಭಿವೃದ್ಧಿ ಸಮಿತಿ ಪಡ್ರೆ- ವಾಣೀನಗರ ಇದರ ಸಂಯುಕ್ತ ಆಶ್ರಯದಲ್ಲಿ ಮಾ. 2 ರಂದು ಶುಕ್ರವಾರ ಹದಿನಾಲ್ಕನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನೂತನ ಸಭಾಭವನ "ಪಾಂಚಜನ್ಯ" ದ ಉದ್ಘಾಟನಾ ಸಮಾರಂಭ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 
    ಕಾರ್ಯಕ್ರಮದ ಅಂಗವಾಗಿ ಮಾ.2 ರಂದು ಬೆಳಿಗ್ಗೆ  8 ಕ್ಕೆ ಗಣಹೋಮ, ಸಂಜೆ  4 ಕ್ಕೆ ಭಜನಾ ಕಾರ್ಯಕ್ರಮ, 5 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ ಮತ್ತು ಕಥಾ ಪಾರಾಯಣ, ವೇದಮೂತರ್ಿ ರವಿಚಂದ್ರ ನೆಲ್ಲಿತ್ತಾಯ, ಬಲ್ನಾಡು, ಪುತ್ತೂರು ಇವರಿಂದ ನಡೆಯಲಿದೆ.
   ರಾತ್ರಿ ಗಂಟೆ 7.30 ಕ್ಕೆ ಮಹಾಪೂಜೆ, ಮಂಗಳಾರತಿ, ಪ್ರಸಾದ ಹಾಗೂ ಭೋಜನ ವಿತರಣೆ. ರಾತ್ರಿ  8.30 ಕ್ಕೆ ಪಾಂಚಜನ್ಯ ಸಭಾಭವನ ಉದ್ಘಾಟನೆಯನ್ನು  ಧಾಮರ್ಿಕ ಮುಂದಾಳು, ಉದ್ಯಮಿ  ಬಿ ವಸಂತ ಪೈ ನೆರವೇರಿಸಲಿದ್ದು ಭಜನಾ ಸಂಘದ ಗೌರವಾಧ್ಯಕ್ಷ ಕೆ.ಗಣಪತಿ  ಭಟ್ ಪತ್ತಡ್ಕ ಅಧ್ಯಕ್ಷತೆ ವಹಿಸುವರು.  ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿ ಅವರು ಧಾಮರ್ಿಕ ಉಪಾನ್ಯಾಸ ನೀಡಲಿದ್ದು ಭಜನಾ ಸಂಘದ ಅಧ್ಯಕ್ಷರುಗಳಾಗಿರುವ ಸತ್ಯನಾರಾಯಣ ಭಟ್ , ಶೀನ ನಾಯ್ಕ ಎಂ., ಪ್ರಕಾಶ ಎನ್ ಅವರು ಉಪಸ್ಥಿತರಿರುವರು.
  ರಾತ್ರಿ 10 ಕ್ಕೆ ಶ್ರೀ ಕೋದಂಡರಾಮ ಕೃಪಾಪೋಶಿತ ಯಕ್ಷಗಾನ ಮಂಡಳಿ ಹನುಮಗಿರಿ  ಇವರಿಂದ  ಚಂದ್ರಾವಳಿ- ಮತ್ಸ್ಯಾವತಾರ-ಕುಂಭಕರ್ಣ  ಯಕ್ಷಗಾನ ಬಯಲಾಟ ನಡೆಯಲಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries