ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ
ಬದಿಯಡ್ಕ : 2017-18ನೇ ಸಾಲಿನ ಯೋಜನೆಯಲ್ಲಿ ಬದಿಯಡ್ಕ ಗ್ರಾಮಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ 8ನೇ ತರಗತಿಯ ವಿದ್ಯಾಥರ್ಿಗಳಿಗೆ ನೀಡುವ ಸೈಕಲ್ ವಿತರಣಾ ಸಮಾರಂಭವು ಬುಧವಾರ ಗ್ರಾಮಪಂಚಾಯತು ಪರಿಸರದಲ್ಲಿ ನಡೆಯಿತು.
ಗ್ರಾಮಪಂಚಾಯತ್ ಉಪಾಧ್ಯಕ್ಷೆ ಸೈಬುನ್ನೀಸ ಮೊಯ್ದೀನ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸೈಕಲ್ ವಿತರಣೆಯನ್ನು ನೆರವೇರಿಸಿ ಮಾತನಾಡಿ ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿರಿಸಿ ಗ್ರಾಮಪಂಚಾಯತು ವತಿಯಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸೈಕಲ್ ಪಡೆದುಕೊಂಡ ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿರಬೇಕೆಂದು ಕರೆನೀಡಿದರು. ಸ್ಥಾಯೀಸಮಿತಿ ಅಧ್ಯಕ್ಷ ಅನ್ವರ್, ಗ್ರಾ.ಪಂ.ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಪಂ.ಕಾರ್ಯದಶರ್ಿ ಮನೋಜ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿದರು. ಪಂ. ಸದಸ್ಯರುಗಳಾದ ಶಾಂತಾ ಬಾಬು, ಜಯಂತಿ, ಪ್ರೇಮ, ವಿಶ್ವನಾಥ ಪ್ರಭು, ಮಹಮ್ಮದ್, ಎಸ್.ಸಿ.ಪ್ರಮೋಟರ್ ಪುಷ್ಪರಾಜ್, ವಿವಿಧ ಶಾಲೆಗಳ ಅಧ್ಯಾಪಕರು ಉಪಸ್ಥಿತರಿದ್ದರು. ವಿದ್ಯಾಭ್ಯಾಸ ಸ್ಥಾಯೀಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸ್ವಾಗತಿಸಿ, ಇಂಪ್ಲಿಮೆಂಟ್ ಆಫೀಸರ್ ಅಂಬಿಕಾ ಸರಸ್ವತಿ ಟೀಚರ್ ವಂದಿಸಿದರು.
ಬದಿಯಡ್ಕ : 2017-18ನೇ ಸಾಲಿನ ಯೋಜನೆಯಲ್ಲಿ ಬದಿಯಡ್ಕ ಗ್ರಾಮಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ 8ನೇ ತರಗತಿಯ ವಿದ್ಯಾಥರ್ಿಗಳಿಗೆ ನೀಡುವ ಸೈಕಲ್ ವಿತರಣಾ ಸಮಾರಂಭವು ಬುಧವಾರ ಗ್ರಾಮಪಂಚಾಯತು ಪರಿಸರದಲ್ಲಿ ನಡೆಯಿತು.
ಗ್ರಾಮಪಂಚಾಯತ್ ಉಪಾಧ್ಯಕ್ಷೆ ಸೈಬುನ್ನೀಸ ಮೊಯ್ದೀನ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸೈಕಲ್ ವಿತರಣೆಯನ್ನು ನೆರವೇರಿಸಿ ಮಾತನಾಡಿ ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿರಿಸಿ ಗ್ರಾಮಪಂಚಾಯತು ವತಿಯಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಸೈಕಲ್ ಪಡೆದುಕೊಂಡ ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ವಿದ್ಯಾಭ್ಯಾಸದಲ್ಲೂ ಮುಂಚೂಣಿಯಲ್ಲಿರಬೇಕೆಂದು ಕರೆನೀಡಿದರು. ಸ್ಥಾಯೀಸಮಿತಿ ಅಧ್ಯಕ್ಷ ಅನ್ವರ್, ಗ್ರಾ.ಪಂ.ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು, ಪಂ.ಕಾರ್ಯದಶರ್ಿ ಮನೋಜ್, ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿದರು. ಪಂ. ಸದಸ್ಯರುಗಳಾದ ಶಾಂತಾ ಬಾಬು, ಜಯಂತಿ, ಪ್ರೇಮ, ವಿಶ್ವನಾಥ ಪ್ರಭು, ಮಹಮ್ಮದ್, ಎಸ್.ಸಿ.ಪ್ರಮೋಟರ್ ಪುಷ್ಪರಾಜ್, ವಿವಿಧ ಶಾಲೆಗಳ ಅಧ್ಯಾಪಕರು ಉಪಸ್ಥಿತರಿದ್ದರು. ವಿದ್ಯಾಭ್ಯಾಸ ಸ್ಥಾಯೀಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸ್ವಾಗತಿಸಿ, ಇಂಪ್ಲಿಮೆಂಟ್ ಆಫೀಸರ್ ಅಂಬಿಕಾ ಸರಸ್ವತಿ ಟೀಚರ್ ವಂದಿಸಿದರು.